ರಾಜಸ್ಥಾನದಲ್ಲಿ ವೀರ ಮರಣ ಅಪ್ಪಿದ ಹರಿಹರದ ಸೈನಿಕ ಜಾವೇದ್
ಭಾರತ
- 2 month, 12 days ago
ನಗರದ ಯೋಧ ಜಾವೇದ್ (33) ರಾಜಸ್ಥಾನದ ಪೋಖ್ರಾನ್ನಲ್ಲಿ ವೀರ ಮರಣ ಅಪ್ಪಿದ್ದಾನೆ. ರಾಜಸ್ಥಾನದ ಪೊಖ್ರಾನ್ನ ಆರ್ಮಿ ಮದ್ರಾಸ್ ಎಂಜಿನಿಯರಿಂಗ್ ಗ್ರೂಪ್ನಲ್ಲಿ ತರಬೇತಿ ಪಡೆಯುವ ವೇಳೆ ಆಕಸ್ಮಿಕವಾಗಿ ಬಾಂಬ್ ಸಿಡಿದು ಜಾವೇದ್ ಮೃತ ಪಟ್ಟಿದ್ದು, ಆತನ ಜೊತೆಗಿದ್ದ ಮತ್ತೊಬ್ಬ ಯೋಧ ತೀವ್ರವಾಗಿ ಗಾಯಗೊಂಡಿದ್ದಾರೆ. ದಾವಣಗೆರೆಯ ಹರಿಹರ ನಗರದ ನಿವಾಸಿ ಅಬ್ದುಲ್ ಖಾದರ್ ಸಾಬ್ ಅವರ ಮಗ ಜಾವೇದ್ 2004ರಲ್ಲಿ ಸೇನೆ ಸೇರಿದ್ದರು. ಇವರು 5 ವರ್ಷಗಳ ಹಿಂದೆ ಮದುವೆ ಆಗಿದ್ದರು. ಇಬ್ಬರು ಮುದ್ದಾದ ಹೆಣ್ಣುಮಕ್ಕಳನ್ನು ಜಾವೇದ್ ಅಗಲಿದ್ದಾರೆ.