ಫೆ.18ರಂದು ಅದಮ್ಯ ಜೀವನೋತ್ಸಾಹದ ಪಗೋ ಸಂಕಥನ
ನಿಷ್ಪಕ್ಷಪಾತ ವರದಿಗಾರಿಕೆಗೆ ಹೆಸರಾಗಿದ್ದ, ಕಿರಿಯ ಪತ್ರಕರ್ತರಿಗೆ ಆದರ್ಶಪ್ರಾಯವಾಗಿದ್ದ, ಯಾರ ಮುಲಾಜಿಗೂ ಒಳಗಾಗದೆ ವಸ್ತುನಿಷ್ಠ ಸುದ್ದಿಗಳನ್ನು ಬರೆಯುತ್ತಿದ್ದ ಹಿರಿಯ ಪತ್ರಕರ್ತ ಪದ್ಯಾಣ ಗೋಪಾಲಕೃಷ್ಣ ಅವರ ಅಂಕಣಬರಹ ಪುಸ್ತಕ ರೂಪದಲ್ಲಿ ಲೋಕಾರ್ಪಣೆಯಾಗುತ್ತಿದೆ.
1995ನೆ ಇಸವಿಯಲ್ಲಿ ಹೊಸದಿಗಂತ ಪತ್ರಿಕೆಯ ವಾರದ ಕಾಲಂನಲ್ಲಿ 26 ವಾರ ಮೂಡಿಬಂದ 'ವಿಶೇಷ ಸೃಷ್ಟಿಗಳ ಲೋಕದಲ್ಲಿ' ಮಂಗಳೂರಿನ ಹಿರಿಯ ಪತ್ರಕರ್ತ ಪದ್ಯಾಣ ಗೋಪಾಲಕೃಷ್ಣ (ಪ.ಗೋ.) ಅವರ ಅಂಕಣ ಬರಹ. ಈ ಅಂಕಣ ಬರಹಗಳೇ ಹೊತ್ತಗೆಯ ರೂಪದಲ್ಲಿ ಹೊರಬರುತ್ತಿವೆ.