12ನೇ ತರಗತಿ ಪರೀಕ್ಷೆಗೆ ಹೋಗಿದ್ದ ಆದಿಲ್ ಮನೆಗೆ ಮರಳಲಿಲ್ಲ
ಜಮ್ಮು ಮತ್ತು ಕಾಶ್ಮೀರದ ಪುಲ್ವಾಮದ ಅವಂತಿಪುರ್ನಲ್ಲಿ ಉಗ್ರರು ಸೇನಾ ವಾಹನದ ಮೇಲೆ ದಾಳಿ ನಡೆಸಿದ್ದಾರೆ. ಈ ದಾಳಿಯ ರೂವಾರಿ ಜೈಷ್-ಎ-ಮೊಹಮ್ಮದ್ ಉಗ್ರ ಸಂಘಟನೆಯ ಆದಿಲ್ ಅಹ್ಮದ್ ದಾರ್. ಆದಿಲ್ ಅಹ್ಮದ್ ದಾರ್ ಭಯೋತ್ಪಾದನಾ ಚಟುಟವಟಿಕೆಗಳ ಕುರಿತು ತಂದೆ ಗುಲಾಂ ದಾರ್ಗೆ ಯಾವುದೇ ಮಾಹಿತಿ ಇರಲಿಲ್ಲ. ಪುತ್ರ ಆತ್ಮಾಹುತಿ ಬಾಂಬರ್ ಆಗಿದ್ದಾನೆ ಎಂಬ ಮಾಹಿತಿ ಜಮ್ಮು ಮತ್ತು ಕಾಶ್ಮೀರದ ಪೊಲೀಸರಿಂದ ತಿಳಿದಿತ್ತು. '12ನೇ ತರಗತಿ ಪರೀಕ್ಷೆ ಬರೆಯಲು ಅವರು ಜಮ್ಮುವಿಗೆ ತೆರಳಿದ್ದ. ಬಳಿಕ ವಾಪಸ್ ಆಗಲಿಲ್ಲ. ಆತನ ಯಾವುದೇ ಚಟುವಟಿಕೆ ಕುರಿತು ಮಾಹಿತಿ ಇರಲಿಲ್ಲ' ಎಂದು ಗುಲಾಂ ದಾರ್ ಹೇಳಿದ್ದಾರೆ.