India Short News

ಓಮಿಕ್ರಾನ್‌: ಗಂಭೀರ ಪರಿಣಾಮದ ಎಚ್ಚರಿಕೆ ನೀಡಿದ WHO

ಓಮಿಕ್ರಾನ್‌: ಗಂಭೀರ ಪರಿಣಾಮದ ಎಚ್ಚರಿಕೆ ನೀಡಿದ WHO

"ಕೊರೊನಾ ವೈರಸ್‌ ಸೋಂಕಿನ ಹೊಸ ರೂಪಾಂತರ ಓಮಿಕ್ರಾನ್‌ ಅತ್ಯಂತ ಅಪಾಯಕಾರಿ," ಎಂದಿರುವ ವಿಶ್ವ ಆರೋಗ್ಯ ಸಂಸ್ಥೆಯು "ಜಾಗತಿಕವಾಗಿ ಅತ್ಯಂತ ಗಂಭೀರ ಪರಿಣಾಮವನ್ನು ಈ ಹೊಸ ರೂಪಾಂತರವು ಉಂಟು ಮಾಡಲಿದೆ," ಎಂಬ ಎಚ್ಚರಿಕೆಯನ್ನು ಸೋಮವಾರ ನೀಡಿದೆ. ಭಾನುವಾರವಷ್ಟೇ ಓಮಿಕ್ರಾನ್‌ ಬಗ್ಗೆ ಮಾಹಿತಿ ನೀಡಿದ ವಿಶ್ವ ಆರೋಗ್ಯ ಸಂಸ್ಥೆಯು ಕೊವಿಡ್-19 ಸಾಂಕ್ರಾಮಿಕ ಪಿಡುಗಿನಿಂದ ಜಗತ್ತನ್ನು ತತ್ತರಿಸುವಂತೆ ಮಾಡಿರುವ ರೂಪಾಂತರ ತಳಿಗಳಲ್ಲೇ ಡೆಲ್ಟಾ ಅತ್ಯಂತ ಅಪಾಯಕಾರಿಯಾಗಿತ್ತು. ಆದರೆ ಈಗ ಪತ್ತೆಯಾಗಿರುವ ಓಮಿಕ್ರಾನ್ ರೂಪಾಂತರವು ಡೆಲ್ಟಾಗಿಂತಲೂ ಅಪಾಯಕಾರಿ ಎಂದು ತಿಳಿಸಿದೆ. ಇನ್ನು ಸೋಮವಾರ ಮತ್ತೆ ಕೊರೊನಾ ವೈರಸ್‌ನ ಹೊಸ ರೂಪಾಂತರ ಓಮಿಕ್ರಾನ್‌ ಬಗ್ಗೆ ಎಚ್ಚರಿಕೆ ನೀಡಿರುವ ವಿಶ್ವ ಆರೋಗ್ಯ ಸಂಸ್ಥೆಯು, ಈ ಓಮಿಕ್ರಾನ್‌ ಎಷ್ಟು ಅಪಾಯಕಾರಿ ಎಂಬುವುದನ್ನು ವಿವರಿಸಿದೆ. ಈ ಹೊಸ ರೂಪಾಂತರ ಓಮಿಕ್ರಾನ್‌ B.1.1.529 ಹೆಚ್ಚು ವಿಭಿನ್ನವಾದ ರೂಪಾಂತರವಾಗಿದೆ ಎಂದು ತಿಳಿಸಿದೆ.

ಚಿತ್ರಗಳು: ದಕ್ಷಿಣ ಆಫ್ರಿಕಾದಲ್ಲಿ ಜುಮಾ ಗಲಭೆ, ಲೂಟಿ, ಬೆಂಕಿ, ಹತ್ಯೆ

ಚಿತ್ರಗಳು: ದಕ್ಷಿಣ ಆಫ್ರಿಕಾದಲ್ಲಿ ಜುಮಾ ಗಲಭೆ, ಲೂಟಿ, ಬೆಂಕಿ, ಹತ್ಯೆ

ದಕ್ಷಿಣ ಆಫ್ರಿಕಾದ ಮಾಜಿ ಅಧ್ಯಕ್ಷನ ಬಂಧನನದ ಬಳಿಕ ಶುರುವಾದ ಹಿಂಸಾಚಾರ 8ನೇ ದಿನಕ್ಕೆ ತಿರುಗಿದ್ದು, ಸುಮಾರು 300ಕ್ಕೂ ಹೆಚ್ಚು ಮಂದಿ ಹತ್ಯೆಯಾಗಿದ್ದಾರೆ. ಅದರಲ್ಲಿ ಸುಮಾರು 70 ಮಂದಿ ಭಾರತೀಯರು ಸೇರಿರುವುದು ಆತಂಕ ಮೂಡಿಸಿದೆ.
ದಕ್ಷಿಣ ಆಫ್ರಿಕಾದ ಮಾಜಿ ಅಧ್ಯಕ್ಷ ಜೋಕೋಬ್ ಜೂಮಾ ಅವರು ನ್ಯಾಯಾಂಗ ನಿಂದನೆ ಮಾಡಿದ್ದ ಕಾರಣಕ್ಕಾಗಿ ಸುಪ್ರೀಂಕೋರ್ಟ್ ಆದೇಶದಂತೆ ಪೊಲೀಸರು ಬಂಸಿದ್ದಾರೆ. ಈ ಘಟನೆಯನ್ನು ನೆಪವಾಗಿಟ್ಟುಕೊಂಡು ಶುರುವಾದ ಹಿಂಸಾಚಾರ ದಕ್ಷಿಣ ಆಫ್ರಿಕಾವನ್ನೇ ತಲ್ಲಣಗೊಳಿಸಿದೆ.
ಸುಮಾರು 200 ವರ್ಷಗಳ ಹಿಂದೆ ದಕ್ಷಿಣ ಆಫ್ರಿಕಾಕ್ಕೆ ಬಂದಿದ್ದ ಭಾರತೀಯರು ಡರ್ಬನ್‍ನಲ್ಲಿ ಹೆಚ್ಚಾಗಿ ವಾಸಿಸುತ್ತಿದ್ದು, ಅಲ್ಲಿಯೇ ವ್ಯಾಪಾರ ಮಾಡುವ ಮೂಲಕ ಬದುಕು ಕಟ್ಟಿಕೊಂಡಿದ್ದಾರೆ. ಸ್ಥಳೀಯ ಪ್ರಜೆಗಳಾಗಿ ಪರಿವರ್ತನೆಯಾಗಿರುವ ಅವರುಗಳ ಮೇಲಿನ ಹಿಂಸಾಚಾರ ಮುಗಿಲು ಮುಟ್ಟಿದೆ ಎಂದು ದಕ್ಷಿಣ ಆಫ್ರಿಕಾದಲ್ಲಿ ನೆಲೆಸಿರುವ ವೈದ್ಯರಾದ ಶ್ರೀನಿ ಆತಂಕ ವ್ಯಕ್ತಪಡಿಸಿದ್ದಾರೆ.

ಮಾರುಕಟ್ಟೆಯಲ್ಲಿ ಸದ್ದು ಮಾಡಲು ಬರುತ್ತಿದೆ ಸ್ಯಾಮ್‌ಸಂಗ್‌ M35 5G

ಮಾರುಕಟ್ಟೆಯಲ್ಲಿ ಸದ್ದು ಮಾಡಲು ಬರುತ್ತಿದೆ ಸ್ಯಾಮ್‌ಸಂಗ್‌ M35 5G


ಶ್ರೀರಾಮ ನವಮಿ ಪ್ರೀತಿ ಪಾತ್ರರಿಗೆ ಕಳುಹಿಸುವಂತಹ ಶುಭಾಶಯ ಸಂದೇಶಗಳು

ಶ್ರೀರಾಮ ನವಮಿ ಪ್ರೀತಿ ಪಾತ್ರರಿಗೆ ಕಳುಹಿಸುವಂತಹ ಶುಭಾಶಯ ಸಂದೇಶಗಳು

ರಾಮ ನವಮಿ ಹಿಂದೂ ಹಬ್ಬವಾಗಿದ್ದು, ಇದು ಭಗವಾನ್ ರಾಮನ ಜನ್ಮ ವಾರ್ಷಿಕೋತ್ಸವದ ಆಚರಣೆಯಾಗಿದೆ. ಚೈತ್ರ ಮಾಸದ ಶುಕ್ಲ ಪಕ್ಷದ ಒಂಬತ್ತನೇ ದಿನದಂದು ಶ್ರೀರಾಮ ನವಮಿಯನ್ನು ಆಚರಿಸಲಾಗುತ್ತದೆ. ಗ್ರೆಗೋರಿಯನ್ ಕ್ಯಾಲೆಂಡರ್ ಪ್ರಕಾರ, ಈ ದಿನ ಸಾಮಾನ್ಯವಾಗಿ ಮಾರ್ಚ್ ಮತ್ತು ಏಪ್ರಿಲ್ ತಿಂಗಳ ನಡುವೆ ಬರುತ್ತದೆ. ಈ ಬಾರಿ ಇದನ್ನು ಏಪ್ರಿಲ್‌ 10ರಂದು ಆಚರಿಸಲಾಗುತ್ತದೆ. ಅನೇಕ ಹಿಂದೂಗಳು ರಾಮನವಮಿಯ ಸಂದರ್ಭದಲ್ಲಿ ಉಪವಾಸ ಮಾಡುತ್ತಾರೆ. ಇದರಿಂದ ಹಿಂದೂಗಳ ಹೃದಯ ಸಾಮ್ರಾಟ, ಮರ್ಯಾದ ಪುರುಷೋತ್ತಮ, ದಶರಥ ನಂದನ ಶ್ರೀರಾಮನ ಆಶೀರ್ವಾದ ಸಿಗಲಿದೆ ಎನ್ನುವ ನಂಬಿಕೆ ಇದೆ.