ಹೆಚ್ಚಿನ ಓದಿಗೆ
: Boldsky Kannada
ಸೆಪ್ಟೆಂಬರ್ 5 ಶಿಕ್ಷಕರ ದಿನ. 1962ರಿಂದಲೂ ಆಚರಿಸಿಕೊಂಡು ಬರುತ್ತಿರುವ ಈ ದಿನ ಭಾರತೀಯ ಶಿಕ್ಷಣ ವ್ಯವಸ್ಥೆಗೆ ಅಪ್ರತಿಮ ಕೊಡುಗೆ ನೀಡಿದ ಶಿಕ್ಷಕ, ದಾರ್ಶನಿಕ, ದೇಶದ ಮೊದಲ ರಾಷ್ಟ್ರಪತಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ರವರ ಜನ್ಮದಿನವೂ ಹೌದು. "ಶಿಕ್ಷಕರು ಯಾವುದೇ ದೇಶದ ಅತ್ಯುತ್ತಮ ಮೆದುಳುಗಳಾಗಬೇಕು" ಎಂದು ಡಾ. ರಾಧಾಕೃಷ್ಣನ್ ಕರೆ ನೀಡಿದ್ದರು.
ಅತ್ಯುತ್ತಮ ಶಿಕ್ಷಕರಾಗಿದ್ದ ಸರ್ವಪಲ್ಲಿ ರಾಧಾಕೃಷ್ಣರವರ ಹುಟ್ಟುಹಬ್ಬದಂದು ವಿದ್ಯಾರ್ಥಿಗಳು ಬಂದು ನಿಮ್ಮ ಹುಟ್ಟು ಹಬ್ಬವನ್ನು ಅದ್ಧೂರಿಯಾಗಿ ಆಚರಿಸಲಿದ್ದೇವೆ ಎಂದಾಗ ಅವರು ನನ್ನ ಹುಟ್ಟುಹಬ್ಬವನ್ನು.
ಆಗಸ್ಟ್ 22ಕ್ಕೆ ಹಿಂದೂಗಳಿಗೆ ವಿನಾಯಕ ಚತುರ್ಥಿಯ ಸಂಭ್ರಮ. ಹಿಂದೂ ಧರ್ಮದಲ್ಲಿ ಎಲ್ಲಾ ಪೂಜೆಗಳಲ್ಲಿ ಗಣಪನ ಪೂಜೆ ಮಾಡಿಯೇ ಮಾಡುತ್ತಾರೆ. ವಿಘ್ನ ನಿವಾರಕನನ್ನು ಪೂಜಿಸಿದರೆ ಎಲ್ಲಾ ಕಾರ್ಯಗಳು ನಿರ್ವಿಘ್ನವಾಗಿ ನಡೆಯುತ್ತದೆ ಎಂಬ ಅಚಲ ನಂಬಿಕೆ ಭಕ್ತರದ್ದು.
ಗಣೇಶ ಚತುರ್ಥಿಯಂದು ಗಣಪನ ಮೂರ್ತಿಯನ್ನು ಪ್ರತಿಷ್ಠಾಪಿಸಿ, ಪೂಜೆಯನ್ನು ಮಾಡಿ, ಗಣಪನಿಗೆ ಇಷ್ಟವಾದ ಮೋದಕಗಳನ್ನು ನೈವೇದ್ಯ ವಾಗಿ ಇಟ್ಟು ನಂತರ ಮೂರು ದಿನಕ್ಕೆ ಅಥವಾ ಏಳು ದಿನಕ್ಕೆ ಹೀಗೆ ತಮ್ಮ ಅನುಕೂಲಕ್ಕೆ ತಕ್ಕಂತೆ ವಿಸರ್ಜನೆ ಮಾಡಲಾಗುವುದು.
ಇಲ್ಲಿ ನಾವು ಗಣೇಶ ಚತುರ್ಥಿಗೆ ನಿಮ್ಮ ಪ್ರೀತಿ ಪಾತ್ರರಿಗೆ ವಿಶ್ ಮಾಡಲು ಶುಭಾಶಯಗಳನ್ನು ನೀಡಿದ್ದೇವೆ ನೋಡಿ:
ಜೀವನದಲ್ಲಿ ಎದುರಾಗಲು ಸಂಕಷ್ಟಗಳನ್ನು ದೂರ ಮಾಡುವ, ಸಿದ್ಧಿ-ಬುದ್ಧಿ ಎಂದರೆ ಜ್ಞಾನದಿಂದ ಆಶೀರ್ವದಿಸಲ್ಪಟ್ಟ ಮತ್ತು ಜ್ಞಾನವನ್ನು ವಿಶ್ಲೇಷಿಸುವ ವಿನಾಯಕ ಚತುರ್ಥಿಗೆ ಇನ್ನೇನು ದಿನಗಣನೆ ಆರಂಭವಾಗಿದೆ. 2021ನೇ ಸಾಲಿನಲ್ಲಿ ಸೆಪ್ಟೆಂಬರ್ 10ರಂದು ಗಣೇಶ ಚತುರ್ಥಿ ಆಚರಿಸಲಾಗುತ್ತಿದೆ.
ಭಾದ್ರಪದ ಮಾಸ, ಶುಕ್ಲ ಪಕ್ಷ, ಚತುರ್ಥಿಯಂದು ಸೆಪ್ಟೆಂಬರ್ 10 ಶುಕ್ರವಾರ ವಿನಾಯಕ ಎಲ್ಲರ ಮನೆಗೆ ಬರಲಿದ್ದಾರೆ. ಈ ದಿನ ನಿಮ್ಮ ಬಂಧು ಬಾಂಧವರಿಗೆ, ಸ್ನೇಹಿತರಿಗೆ ಶುಭ ಕೋರಲು ಆಕರ್ಷಕ ಸಂದೇಶಗಳನ್ನು ನಾವಿಲ್ಲಿ ನೀಡಲಿದ್ದೇವೆ. ಫೇಸ್ಬುಕ್.
ಕೃಷ್ಣ ಜನ್ಮಾಷ್ಟಮಿಯನ್ನು ಭಾರತದಲ್ಲಿ ಆಗಸ್ಟ್ 11 ಹಾಗೂ 12ರಂದು ಆಚರಿಸಲಾಗುವುದು. ಜನ್ಮಾಷ್ಟಮಿ ಅಥವಾ ಗೋಕುಲಾಷ್ಟಮಿ ಎಂದರೆ ಸಂಭ್ರಮದ ಹಬ್ಬ. ಬಾಧ್ರಪದ ಮಾಸದ ಕೃಷ್ಣ ಪಕ್ಷದ ಅಷ್ಟಮಿಯೆಂದು ಜನ್ಮಾಷ್ಟಮಿ ಆಚರಣೆ ಮಾಡಲಾಗುವುದು. ಈ ದಿನ ಕೃಷ್ಣನಿಗೆ ಅಲಂಕಾರ ಮಾಡಿ, ಪೂಜೆ ಸಲ್ಲಿಸಿ, ಅವನಿಗೆ ಇಷ್ಟವಾದ ತಿಂಡಿಗಳನ್ನು ನೈವೇದ್ಯವಾಗಿ ಇಡಲಾಗುವುದು.
ಶ್ರೀ ವಿಷ್ಣು ಧರ್ಮವನ್ನು ರಕ್ಷಿಸಲು ಶ್ರೀಕೃಷ್ಣ ಜನ್ಮ ತಾಳಿ ಬಂದ ಎಂದು ಹೇಳಲಾಗುತ್ತದೆ. ಕೃಷ್ಣನ ಅವತಾರವನ್ನು ಶ್ರೀವಿಷ್ಣುವಿನ ಎಂಟನೇ ಅವತಾರ ಎಂದು ಹೇಳಲಾಗುವುದು.
ಆಗಸ್ಟ್ 3ಕ್ಕೆ ಅಣ್ಣ-ತಂಗಿಯ ಮಧುರ ಬಾಂಧವ್ಯ ಮತ್ತಷ್ಟು ಗಟ್ಟಿಯಾಗಿಸುವ ರಕ್ಷಾ ಬಂಧನ ಹಬ್ಬ. ಈ ಹಬ್ಬದಂದು ಸಹೋದರಿ ತನ್ನ ಸಹೋದರ ಕೈಗೆ ರಾಖಿ ಕಟ್ಟುವ ಸಂಭ್ರಮದಲ್ಲಿದ್ದರೆ, ಅಣ್ಣ ಮುದ್ದಿನ ಸಹೋದರಿಗೆ ಆಕರ್ಷಕ ಗಿಫ್ಟ್ ನೀಡಿ ನಿನ್ನ ಸದಾ ರಕ್ಷಣೆ ಮಾಡುವೆ ಎಂದು ಅಭಯ ನೀಡುವ ದಿನ.
ಪುರಾಣಗಳಲ್ಲಿ ದ್ರೌಪದಿಯು ಶ್ರೀ ಕೃಷ್ಣನಿಗೆ ರಕ್ಷಾಬಂಧನವನ್ನು ಕಟ್ಟಿದಳಂತೆ. ಇದರ ಜೊತೆಗೆ ಪಾರ್ವತಿಯು ಸಹ ವಿಷ್ಣುವಿಗೆ ರಕ್ಷಾ ಬಂಧನವನ್ನು ಕಟ್ಟಿ ಆತನನ್ನು ತನ್ನ ಅಣ್ಣನಾಗಿ ಸ್ವೀಕರಿಸಿದಳಂತೆ. ಅದಕ್ಕೆ ಪ್ರತಿಯಾಗಿ ವಿಷ್ಣು ಪಾರ್ವತಿ ದೇವಿಗೆ ಅಪಾಯವೊದಗಿದಾಗ ಆಕೆಯನ್ನು ತಾನು ಕಾಪಾಡುವುದಾಗಿ ಅಭಯವನ್ನಿತ್ತನಂತೆ.
ಗೆಳೆತನ ಎನ್ನುವುದು ಪದಗಳಿಗೆ ಅಥವಾ ಯಾವುದೇ ಕಟ್ಟುಪಾಡುಗಳಿಗೆ ನುಲುಕುವ ಬಂಧವಲ್ಲ. ಎಲ್ಲಾ ರಕ್ತ ಸಂಬಂಧಗಳನ್ನು ಮೀರಿದ ಸುಂದರ ಬಂದವೇ ಗೆಳೆತನ. ಪ್ರಾಣ ಸ್ನೇಹಿತರು ಯಾವತ್ತಿದ್ದರೂ ಸ್ನೇಹಿತರೇ, ಅವರಿಗೆ ಯಾವುದೇ ಒಂದು ದಿನದ ಆಚರಣೆ ಎನ್ನುವುದು ಬೇಕಾಗಿಲ್ಲ.
ಆದರೂ ಪಾಶ್ಚಾತ್ಯ ದೇಶಗಳಲ್ಲಿ ಸ್ನೇಹಿತರಿಗಾಗಿಯೇ ಒಂದು ದಿನವನ್ನು ಮೀಸಲಿಡಲಾಗಿದೆ. ಇದನ್ನು ಅಂತಾರಾಷ್ಟ್ರೀಯ ಸ್ನೇಹಿತರ ದಿನವನ್ನಾಗಿ ಆಚರಿಸಲಾಗುತ್ತದೆ. ವಿಶ್ವಸಂಸ್ಥೆಯು 2011ರ ಎಪ್ರಿಲ್ 27ರಂದು ತನ್ನ ಅಧಿವೇಶನದಲ್ಲಿ ಜುಲೈ 30ನ್ನು ವಿಶ್ವ ಸ್ನೇಹಿತರ ದಿನವನ್ನಾಗಿ ಘೋಷಣೆ ಮಾಡಿತು. ಆದರೆ ಭಾರತದಲ್ಲಿ.
'ಗುರುವಿನ ಗುಲಾಮನಾಗುವ ತನಕ ದೊರೆಯದ್ದಣ್ಣ ಮುಕುತಿ' ಎಂಬ ನಾಣ್ಣುಡಿಯನ್ನು ಕೇಳಿರ್ತಿರಾ. ಜೀವನದಲ್ಲಿ ಪೋಷಕರ ಪಾತ್ರ ಎಷ್ಟಿದೆಯೋ, ಅಷ್ಟೇ ಗುರುಗಳ ಪಾತ್ರವೂ ಇದೆ. ನಮ್ಮಲ್ಲಿರುವ ಅಂಧಕಾರವನ್ನು ದೂರಮಾಡಿ, ಜ್ಞಾನವೆಂಬ ಬೆಳಕನ್ನು ನೀಡುವ ಮಹಾನ್ ಶಕ್ತಿಯೇ ಗುರು. ಬದುಕಲ್ಲಿ ಏನಾದರೂ ಸಾಧಿಸಬೇಕೆಂದರೆ ಗುರುವಿನ ಮಾರ್ಗದರ್ಶನ ಬೇಕೇ ಬೇಕು. ಇಂತಹ ಗುರುವಿಗೆ ನಮನ ಸಲ್ಲಿಸುವ ದಿನವೇ ಗುರುಪೂರ್ಣಿಮ.
ಮನಸ್ಸು ಮತ್ತು ದೇಹವನ್ನು ಒಂದು ಮಾಡುವ ಸಾಧನ ಯೋಗ. ನಮ್ಮ ಭೂಮಿ ಭಾರತದಲ್ಲಿ ಜನ್ಮತಳೆದ ಯೋಗ ಇಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿಖ್ಯಾತಿ ಪಡೆದು ಭಾರತಕ್ಕೆ ಕಿರೀಟದಂತಿದೆ. ಯೋಗದ ಪ್ರಭಾವ, ಅದು ಆರೋಗ್ಯದ ಮೇಲೆ ಬೀರುವ ಆಗಾಧ ಪರಿಣಾಮ ಮತ್ತು ಅದರ ಶಕ್ತಿ ಅರಿತ ವಿದೇಶಗರು ಭಾರತಕ್ಕೆ ಬಂದು ಯೋಗ ಅಭ್ಯಾಸ ಮಾಡುತ್ತಿದ್ದಾರೆ. 2021 ಅಂತಾರಾಷ್ಟ್ರೀಯ ಯೋಗ ದಿನದ ವಿಶೇಷ ಯೋಗ ಕುರಿತು ಮಹತ್ವ ಸಾರುವ ಶುಭಾಶಯಗಳು ಮತ್ತು ಫೇಸ್ಬುಕ್, ವಾಟ್ಸಾಪ್ ಸಂದೇಶಗಳನ್ನು ನಾವಿಲ್ಲಿ ನೀಡಿದ್ದೇವೆ.2021 ಅಂತಾರಾಷ್ಟ್ರೀಯ ಯೋಗ ದಿನದ ವಿಶೇಷ ಯೋಗ ಕುರಿತು ಮಹತ್ವ.
ಜೀವನ ಅನ್ನೋದು ಸುಖ ದುಃಖಗಳ, ಏರುಪೇರುಗಳ ಸಮಪಾಕ ಅನ್ನೋ ಸಂಗತೀನಾ ನಾವೆಲ್ಲರೂ ಅನುಭವಿಸಿ ಬಲ್ಲೆವು. ಯುಗಾದಿ ಹಬ್ಬದಲ್ಲಿ ಹಂಚೋ ಬೇವು-ಬೆಲ್ಲ ಸಾರುವುದೂ ಇದೇ ಸಂದೇಶವನ್ನೇ. ಜೀವನವೆಂದರೆ ಬರೀ ಕಷ್ಟಗಳ ಸರಮಾಲೆ ಅಂತೇನೂ ನಿಟ್ಟುಸಿರು ಬಿಡಬೇಕಾದ್ದಿಲ್ಲ. ಮಾನವ ಜೀವವೊಂದು ಜನಿಸಿದ ಕ್ಷಣದಿಂದ ಹಿಡಿದು, ಸಾಯುವ ಕ್ಷಣದವರೆಗೂ ಆತನ ಜೀವನದಲ್ಲಿ ಹಾಸುಹೊಕ್ಕಾಗಿ ಬರುವ ಸಂತಸದ ಕ್ಷಣಗಳಿಗೇನೂ ಕೊರತೆಯಿಲ್ಲ.
ಜನ್ಮದಿನದ ಸಂಭ್ರಮ, ವಿದ್ಯಾಭ್ಯಾಸದ ಆರಂಭ, ಪದವಿ ಪಡೆದ ಸಂತಸದ ಕ್ಷಣಗಳು, ಉದ್ಯೋಗ ಗಿಟ್ಟಿಸಿಕೊಂಡ ಅಥವಾ ವಿನೂತನ ವ್ಯವಹಾರವನ್ನು ಆರಂಭಿಸಿದ ಕ್ಷಣ,
ತಾಯಂದಿರ ದಿನ ವರ್ಷದ ವಿಶೇಷ ದಿನ. ನಿಮ್ಮ ಮೊದಲ ಗೆಳತಿ,ನಿಮ್ಮ ಮೊದಲ ಸ್ನೇಹಿತೆಗೆ ವಿಶೇಷ ಗೌರವ ಸಲ್ಲಿಸುವ ದಿನ. ನಿಮಗೆ ಯಾವುದೋ ವಿಚಾರಕ್ಕೆ ಸಲಹೆ ಬೇಕಿದ್ದರೆ ಮೊದಲು ಮುಖ ಮಾಡುವುದೇ ತಾಯಿಯ ಎಡೆಗೆ.
ತಾಯಿಯೇ ಭೂಮಿಯಲ್ಲಿ ಕಾಣುವ ಮೊದಲ ದೇವರು. ನಿಮಗೆ ತಿಳಿದಿರುವ ತಾಯಂದಿರನ್ನು ನೀವು ಗೌರವಿಸುವ ಈ ಸುದಿನದಂದು ನಾವಿಲ್ಲಿ ತಾಯಂದಿರ ಬಗೆಗೆ ಹಿರಿಯ ಜೀವಗಳು ಹೇಳಿರುವ ಕೆಲವು ಅಧ್ಬುತ ಮಾತುಗಳನ್ನು ನಿಮಗಾಗಿ ತಿಳಿಸುತ್ತಿದ್ದೇವೆ.
"ತಾಯಿಯೇ ನಿಮ್ಮ ಮೊದಲ ಸ್ನೇಹಿತೆ, ಉತ್ತಮ ಸ್ನೇಹಿತೆ, ನಿಮ್ಮ ಶಾಶ್ವತ ಸ್ನೇಹಿತೆ."
ವಾಯು ಪುತ್ರ, ರಾಮನ ಭಕ್ತ ಹನುಮಂತನ ಪೂಜಿಸಿದರೆ, ಹನುಮಾನ್ ಮಂತ್ರಗಳನ್ನು ಹೇಳಿದರೆ ಜೀವನದಲ್ಲಿ ಕಷ್ಟಗಳೆಲ್ಲಾ ದೂರವಾಗುವುದು.
ಹನುಮಂತನ ಮಂತ್ರ ಪಠಿಸಿದರೆ ಆತ ಧೈರ್ಯ, ಆರೋಗ್ಯ, ಸಂಪತ್ತು ಎಲ್ಲಾ ಕರುಣಿಸುತ್ತಾನೆ, ವಿಘ್ನ ನಿವಾರಕನಂತೆಯೇ ಹನುಮಂತ ಕೂಡ ನಮ್ಮ ಬದುಕಿನಲ್ಲಿರುವ ಎಲ್ಲಾ ಕಷ್ಟಗಳನ್ನು ನಿವಾರಿಸುತ್ತಾನೆ. ಈ ವರ್ಷ ಹನುಮಾನ್ ಜಯಂತಿಯನ್ನು ಏಪ್ರಿಲ್ 27ಕ್ಕೆ ಆಚರಿಸಲಾಗುವುದು.
ಹನುಮಾನ್ ಜಯಂತಿಗೆ ನಿಮ್ಮ ಪ್ರೀತಿ ಪಾತ್ರರರಿಗೆ ಶುಭ ಕೋರಲು ಇಲ್ಲಿದೆ ಅದ್ಭುತ ಸಾಲುಗಳ ಸಂದೇಶ: ಆ ಭಗವಂತ ನಿಮಗೆ, ನಿಮ್ಮ ಕುಟುಂಬಕ್ಕೆ ಆರೋಗ್ಯ, ಐಶ್ವರ್ಯ ನೀಡಿ ಸಂರಕ್ಷಿಸಲಿ.
ಏಪ್ರಿಲ್ 21ರಂದು ರಾಮ ನವಮಿ ಆಚರಿಸಲಾಗುವುದು. ಭಾರತದಲ್ಲಿ ಶ್ರೀರಾಮನನ್ನು ಕೋಟ್ಯಾಂತರ ಮಂದಿ ಪೂಜಿಸುತ್ತಾರೆ. ಶ್ರೀ ರಾಮ ಆದರ್ಶ ಪುರುಷ, ಶ್ರೀರಾಮ ಜನಿಸಿದ ದಿನವನ್ನು ನಾವೆಲ್ಲರೂ ಶ್ರೀರಾಮ ನವಮಿ ಎಂದು ಆಚರಿಸುತ್ತೇವೆ.
ರಾಮನ ಭಕ್ತರು ಚೈತ್ರ ಮಾಸದ ಶುಕ್ಲ ಪಕ್ಷದ ಪಾಡ್ಯದಿಂದ ನವಮಿವರೆಗೆ ರಾಮಾಯಣ ಪಾರಾಯಣ ಮಾಡಿ , ನವಮಿ ದಿನ ರಾಮ ಪಟ್ಟಾಭಿಷೇಕ ಪಾರಾಯಣ ಮಾಡಿ ಹಬ್ಬವನ್ನು ಮುಗಿಸುತ್ತಾರೆ. ಹೀಗೆ 9 ದಿನದ ರಾಮೋತ್ಸವ ಮಾಡುತ್ತಾರೆ .
ರಾಮ ನಾಮ ಜಪ ಮಾಡಿದರೆ ಸಾಕು ರಾಮ ನಮ್ಮನ್ನು ರಕ್ಷಿಸುತ್ತಾನೆ ಎಂಬ ಅಚಲ ನಂಬಿಕೆ ಭಕ್ತರದ್ದು.
ಹಿಂದೂ ಪಂಚಾಗದ ಪ್ರಕಾರ ಏಪ್ರಿಲ್ 13ಕ್ಕೆ ಪ್ಲವ ನಾಮ ಸಂವತ್ಸರ, ಅಂದ್ರೆ ಹೊಸ ವರ್ಷ. ಹೊಸತನ್ನು ಹೊತ್ತು ಯುಗಾದಿ ಬರುತ್ತದೆ. ಎಲ್ಲರಿಗೂ ಹೊಸ ವರ್ಷದ, ಪ್ಲವ ನಾಮ ಸಂವತ್ಸರದ ಶುಭಾಶಯಗಳು...
ಶ್ರೀ ಶಾರ್ವರಿ ಸಂವತ್ಸರ ಸಿಹಿಗಿಂತ ಕಹಿಯೇ ಹೆಚ್ಚಿತ್ತು, ಕೊರೊನಾ ಎಂಬ ಮಹಾಮಾರಿ ನಮ್ಮೆಲ್ಲರ ಬದುಕಿನ ಮೇಲೆ ತುಂಬಾ ಪರಿಣಾಮ ಬೀರಿತ್ತು. ನಾವೀಗ ಪ್ಲವ ನಾಮ ಸಂವತ್ಸರಕ್ಕೆ ಕಾಲಿಡುತ್ತಿದ್ದೇವೆ. ಹೊಸ ವರ್ಷದಲ್ಲಿ ಕಹಿಯೆಲ್ಲಾ ದೂರವಾಗಿ ಸಿಹಿ ಹೆಚ್ಚಲಿ ಎಂಬ ನಿರೀಕ್ಷೆ ನಮ್ಮೆಲ್ಲರದ್ದೂ...
ಈ ಯುಗಾದಿಗೆ ನಿಮ್ಮ ಪ್ರೀತಿ ಪಾತ್ರರರಿಗೆ ಯುಗಾದಿ ಶುಭಾಶಯ ಕೋರಲು ಕನ್ನಡ ಬೋಲ್ಡ್ ಸ್ಕೈ ಶುಭಾಶಯಗಳನ್ನು ನೀಡಿದೆ.
ಬಣ್ಣಗಳ ಓಕುಳಿಯಾಟ ಎಲ್ಲರಲ್ಲೂ ಸಂಭ್ರಮವನ್ನು ಗರಿಗೆದರುವುದು. ಈ ಹಬ್ಬ ಸರ್ವ ಮತಬಾಂಧವರನ್ನು ಒಂದುಗೂಡಿಸುತ್ತದೆ. ಭಾರತದಾದ್ಯಂತ ಹೋಳಿ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಲಾಗುತ್ತದೆ. ಬಣ್ಣಗಳ ಓಕುಳಿಯಾಟ ಸರ್ವ ಮತಬಾಂಧವರನ್ನು ಒಂದುಗೂಡಿಸುತ್ತದೆ. ಜಾತಿ ಮತಗಳ ಭೇದವಿಲ್ಲದೆ ಆಚರಿಸುವ ಬಣ್ಣಗಳ ಹಬ್ಬ ಹೋಳಿ ತನ್ನದೇ ಆಚಾರ ಸಂಪ್ರದಾಯಗಳನ್ನು ಹೊಂದಿದೆ. ಪ್ರತಿಯೊಂದು ಹಬ್ಬಕ್ಕೂ ಆಚಾರ ಸಂಪ್ರದಾಯ ಪ್ರಮುಖವಾಗಿರುತ್ತದೆ ಅದಕ್ಕೆ ಹೋಳಿ ಹಬ್ಬ ಕೂಡ ಹೊರತಲ್ಲ. ಈ ಹಬ್ಬದಂದು ಬಣ್ಣಗಳನ್ನು ಎರಚಾಡುತ್ತಾ ಸಂತೋಷ, ಸಂಭ್ರಮದಿಂದ ಆಚರಿಸಿ ಜೊತೆಗೆ ಈ ಸಂದೇಶಗಳನ್ನು ನಿಮ್ಮ ಪ್ರೀತಿ ಪಾತ್ರರರೊಂದಿಗೆ ಹಂಚಿಕೊಳ್ಳಿ.
ಶಿವರಾತ್ರಿ ಎಂದರೆ ಪವಿತ್ರವಾದ ಕತ್ತಲು. ಭಕ್ತರು ಇಂದು ಪೂರ್ಣ ಮನಸ್ಸಿನಿಂದ ಮತ್ತು ಪ್ರಾಮಾಣಿಕತೆಯಿಂದ ಶಿವನ ನಾಮ, ಜಪಮಂತ್ರಗಳನ್ನು ಸ್ಮರಣೆ ಮಾಡುತ್ತಾ ಶಿವನ ಆಶೀರ್ವಾದಕ್ಕೆ ಪಾತ್ರರಾಗಲು ಬಯಸುತ್ತಾರೆ. ಮಹಾಶಿವರಾತ್ರಿ ಸಮಯದಲ್ಲಿ ಶಿವ ಪಾರ್ವತಿ ಸಮೇತ ಭೂಲೋಕಕ್ಕೆ ಬಂದು ಸಂಚಾರ ಮಾಡಲಿದ್ದು, ಈ ದಿನದಂದು ಯಾರು ನಿಷ್ಕಲ್ಮಷ ಮನಸ್ಸಿನಿಂದ, ಶಿವನಾಮ ಸ್ಮರಣೆ ಮಾಡಿ ಪೂಜಿಸುತ್ತಾರೋ ಅವರ ಪಾಪಗಳು ಪರಿಹಾರವಾಗುತ್ತದೆ ಎಂಬ ನಂಬಿಕೆ ಇದೆ. ನಂಬಿ ಬಂದ ಭಕ್ತರನ್ನು ಎಂದಿಗೂ ನಿರಾಸೆ ಮಾಡದ ದಯಾಮಯಿ ಮಹಾದೇವ ಆರಾಧಕನ ಪವಿತ್ರ ದಿನದಂದು ದೈವೀಕ ಸಂದೇಶ ಸಾರುವ ಅತ್ಯುತ್ತಮ ಶುಭಾಶಯಗಳು ಇಲ್ಲಿವೆ ನೋಡಿ.