ಆಗಸ್ಟ್ 22ಕ್ಕೆ ಹಿಂದೂಗಳಿಗೆ ವಿನಾಯಕ ಚತುರ್ಥಿಯ ಸಂಭ್ರಮ. ಹಿಂದೂ ಧರ್ಮದಲ್ಲಿ ಎಲ್ಲಾ ಪೂಜೆಗಳಲ್ಲಿ ಗಣಪನ ಪೂಜೆ ಮಾಡಿಯೇ ಮಾಡುತ್ತಾರೆ. ವಿಘ್ನ ನಿವಾರಕನನ್ನು ಪೂಜಿಸಿದರೆ ಎಲ್ಲಾ ಕಾರ್ಯಗಳು ನಿರ್ವಿಘ್ನವಾಗಿ ನಡೆಯುತ್ತದೆ ಎಂಬ ಅಚಲ ನಂಬಿಕೆ ಭಕ್ತರದ್ದು.
ಗಣೇಶ ಚತುರ್ಥಿಯಂದು ಗಣಪನ ಮೂರ್ತಿಯನ್ನು ಪ್ರತಿಷ್ಠಾಪಿಸಿ, ಪೂಜೆಯನ್ನು ಮಾಡಿ, ಗಣಪನಿಗೆ ಇಷ್ಟವಾದ ಮೋದಕಗಳನ್ನು ನೈವೇದ್ಯ ವಾಗಿ ಇಟ್ಟು ನಂತರ ಮೂರು ದಿನಕ್ಕೆ ಅಥವಾ ಏಳು ದಿನಕ್ಕೆ ಹೀಗೆ ತಮ್ಮ ಅನುಕೂಲಕ್ಕೆ ತಕ್ಕಂತೆ ವಿಸರ್ಜನೆ ಮಾಡಲಾಗುವುದು.
ಇಲ್ಲಿ ನಾವು ಗಣೇಶ ಚತುರ್ಥಿಗೆ ನಿಮ್ಮ ಪ್ರೀತಿ ಪಾತ್ರರಿಗೆ ವಿಶ್ ಮಾಡಲು ಶುಭಾಶಯಗಳನ್ನು ನೀಡಿದ್ದೇವೆ ನೋಡಿ:
ಜೀವನದಲ್ಲಿ ಎದುರಾಗಲು ಸಂಕಷ್ಟಗಳನ್ನು ದೂರ ಮಾಡುವ, ಸಿದ್ಧಿ-ಬುದ್ಧಿ ಎಂದರೆ ಜ್ಞಾನದಿಂದ ಆಶೀರ್ವದಿಸಲ್ಪಟ್ಟ ಮತ್ತು ಜ್ಞಾನವನ್ನು ವಿಶ್ಲೇಷಿಸುವ ವಿನಾಯಕ ಚತುರ್ಥಿಗೆ ಇನ್ನೇನು ದಿನಗಣನೆ ಆರಂಭವಾಗಿದೆ. 2021ನೇ ಸಾಲಿನಲ್ಲಿ ಸೆಪ್ಟೆಂಬರ್ 10ರಂದು ಗಣೇಶ ಚತುರ್ಥಿ ಆಚರಿಸಲಾಗುತ್ತಿದೆ.
ಭಾದ್ರಪದ ಮಾಸ, ಶುಕ್ಲ ಪಕ್ಷ, ಚತುರ್ಥಿಯಂದು ಸೆಪ್ಟೆಂಬರ್ 10 ಶುಕ್ರವಾರ ವಿನಾಯಕ ಎಲ್ಲರ ಮನೆಗೆ ಬರಲಿದ್ದಾರೆ. ಈ ದಿನ ನಿಮ್ಮ ಬಂಧು ಬಾಂಧವರಿಗೆ, ಸ್ನೇಹಿತರಿಗೆ ಶುಭ ಕೋರಲು ಆಕರ್ಷಕ ಸಂದೇಶಗಳನ್ನು ನಾವಿಲ್ಲಿ ನೀಡಲಿದ್ದೇವೆ. ಫೇಸ್ಬುಕ್.