ಹೆಚ್ಚಿನ ಓದಿಗೆ
: Boldsky Kannada
ಪ್ರತಿಯೊಬ್ಬರ ಬದುಕಿನಲ್ಲಿ ಮಹಿಳೆಯರ ಪಾತ್ರ ಅತ್ಯಂತ ದೊಡ್ಡದು. ಆಕೆಗಿರುವ ಸ್ಥೈರ್ಯ, ಧೈರ್ಯಕ್ಕೆ ಸರಿಸಾಟಿಯಿಲ್ಲ.ನಿಮ್ಮ ಬದುಕಿನಲ್ಲಿ ಆಕೆಯ ಮಾತ್ರ ಮಹತ್ವವಾಗಿರುತ್ತದೆ. ಆಕೆ ಗೃಹಿಣಿಯಾಗಿರಬಹುದು ಅಥವಾ ಹೊರಗಡೆ ದುಡಿಯುವ ಮಹಿಳೆಯಾಗಿರಬಹುದು, ಇಬ್ಬರಲ್ಲಿ ಯಾರು ಮೇಲಲ್ಲ, ಯಾರೂ ಕೀಳಲ್ಲ... ಇಬ್ಬರ ಪಾತ್ರಗಳು ನಿಮ್ಮ ಸಂಸಾರ ತೂಗಿಸಲು ಬಹುಮುಖ್ಯ. ಆಕೆ ನಿಮಗಾಗಿ ದುಡಿಯುತ್ತಾಳೆ, ಇಡೀ ಬದುಕನ್ನು ನಿಮಗಾಗಿ ಮೀಸಲಿಡುತ್ತಾಳೆ, ಆ ಹೆಣ್ಣಿಗೆ ಮಹಿಳಾ ದಿನಾಚರಣೆಯೆಂದು ಶುಭ ಕೋರಿದರೆ ಅವಳು ತುಂಬಾ ಖುಷಿಯಾಗುತ್ತಾಳೆ. ಇಲ್ಲಿ ನಾವು ನಿಮ್ಮಾಕೆಗೆ ಶುಭ ಕೋರಲು ಕೆಲವೊಂದು ಸಂದೇಶಗಳನ್ನು ನೀಡಿದ್ದೇವೆ.
ಡಿಸೆಂಬರ್ ಅಂದ ತಕ್ಷಣ ಎಲ್ಲರಿಗೂ ತಕ್ಷಣ ನೆನಪಿಗೆ ಬರುವುದು ಕ್ರಿಸ್ಮಸ್ ಆಚರಣೆ. ಇದು ಕ್ರಿಶ್ಚಿಯನ್ರ ಹಬ್ಬವಾದರೂ ಎಲ್ಲರೂ ಸಂತೋಷದಿಂದ ಈ ಆಚರಣೆಯಲ್ಲಿ ಭಾಗವಹಿಸುವುದು ಇದರ ವಿಶೇಷ. ಅದರಲ್ಲೂ ಸಂತಾ ಕ್ಲಾಸ್ ಬರುವುದು, ಕೇಕ್, ವಿವಿಧ ಬಗೆಯ ಭಕ್ಷ್ಯ, ಕ್ರಿಸ್ಮಸ್ ಟ್ರೀ, ವಿವಿಧ ಬಗೆಯ ಭಕ್ಷ್ಯ ಇವುಗಳಿಂದ ಕ್ರಿಸ್ಮಸ್ ತುಂಬಾ ವಿಶೇಷವಾಗಿರುತ್ತದೆ.
ನಾವಿಲ್ಲಿ ಕ್ರಿಸ್ಮಸ್ಗೆ ನಿಮ್ಮ ಪ್ರೀತಿ ಪಾತ್ರರಿಗೆ ಶುಭ ಕೋರಲು ಇಲ್ಲಿ ವಾಟ್ಸಾಪ್ ಹಾಗೂ ಸೋಷಿಯಲ್ ಮೀಡಿಯಾ ಸ್ಟೇಟಸ್ ಹಾಕಲು ಕೆಲವೊಂದು ಶುಭಾಶಯಗಳನ್ನು ನೀಡಿದ್ದೇವೆ ನೋಡಿ:
ಆದಿಕವಿ ಮಹರ್ಷಿ ವಾಲ್ಮೀಕಿ ಹಿಂದೂಗಳ ಧರ್ಮಗ್ರಂಥ ರಾಮಾಯಣ ಮಹಾಕಾವ್ಯದ ಕರ್ತೃ. ವಾಲ್ಮೀಕಿ ಮಹರ್ಷಿಗಳು ಬ್ರಹ್ಮನ ಅನುಗ್ರಹದಿಂದ ರಾಮಾಯಣವನ್ನು ರಚಿಸಿದರು ಎಂಬುದು ಭಾರತೀಯ ನಂಬಿಕೆ. ಇದು ಭಾರತದ ಮೊಟ್ಟ ಮೊದಲ ಮಹಾಕಾವ್ಯ ಎಂಬ ಹಿರಿಮೆಗೆ ಸಹ ಪಾತ್ರವಾದ ಕೃತಿ ಹಾಗೂ ಕರ್ತೃ ಮಹರ್ಷಿ ವಾಲ್ಮೀಕಿ.
ಅಕ್ಟೋಬರ್ 20ರಂದು ಮಹರ್ಷಿ ವಾಲ್ಮೀಕಿ ಅವರು ಜನಿಸಿದ ದಿನ, ಇಂದು ದೇಶಾದ್ಯಂತ ಅವರ ಜಯಂತಿಯನ್ನು ಆಚರಿಸಲಾಗುತ್ತದೆ. ವಿಶೇಷವಾಗಿ ಕರ್ನಾಟಕದಲ್ಲಿ ವಾಲ್ಮೀಕಿ ಜಯಂತಿಗೆ ವಿಶೇಷ ಗೌರವ ನೀಡಲಾಗಿದೆ. ಈ ಹಿನ್ನೆಲೆ ಮಹಾನ್ ಋಷಿ ವಾಲ್ಮೀಕಿ ಅವರು ಹೇಳಿರುವ ಜೀವನಸಾರವುಳ್ಳ ಹೇಳಿಕೆಗಳನ್ನು ನಾವಿಲ್ಲಿ ದಾಖಲಿಸಿದ್ದೇವೆ:
ಸೆಪ್ಟೆಂಬರ್ 5 ಶಿಕ್ಷಕರ ದಿನ. 1962ರಿಂದಲೂ ಆಚರಿಸಿಕೊಂಡು ಬರುತ್ತಿರುವ ಈ ದಿನ ಭಾರತೀಯ ಶಿಕ್ಷಣ ವ್ಯವಸ್ಥೆಗೆ ಅಪ್ರತಿಮ ಕೊಡುಗೆ ನೀಡಿದ ಶಿಕ್ಷಕ, ದಾರ್ಶನಿಕ, ದೇಶದ ಮೊದಲ ರಾಷ್ಟ್ರಪತಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ರವರ ಜನ್ಮದಿನವೂ ಹೌದು. "ಶಿಕ್ಷಕರು ಯಾವುದೇ ದೇಶದ ಅತ್ಯುತ್ತಮ ಮೆದುಳುಗಳಾಗಬೇಕು" ಎಂದು ಡಾ. ರಾಧಾಕೃಷ್ಣನ್ ಕರೆ ನೀಡಿದ್ದರು.
ಅತ್ಯುತ್ತಮ ಶಿಕ್ಷಕರಾಗಿದ್ದ ಸರ್ವಪಲ್ಲಿ ರಾಧಾಕೃಷ್ಣರವರ ಹುಟ್ಟುಹಬ್ಬದಂದು ವಿದ್ಯಾರ್ಥಿಗಳು ಬಂದು ನಿಮ್ಮ ಹುಟ್ಟು ಹಬ್ಬವನ್ನು ಅದ್ಧೂರಿಯಾಗಿ ಆಚರಿಸಲಿದ್ದೇವೆ ಎಂದಾಗ ಅವರು ನನ್ನ ಹುಟ್ಟುಹಬ್ಬವನ್ನು.
ಆಗಸ್ಟ್ 22ಕ್ಕೆ ಹಿಂದೂಗಳಿಗೆ ವಿನಾಯಕ ಚತುರ್ಥಿಯ ಸಂಭ್ರಮ. ಹಿಂದೂ ಧರ್ಮದಲ್ಲಿ ಎಲ್ಲಾ ಪೂಜೆಗಳಲ್ಲಿ ಗಣಪನ ಪೂಜೆ ಮಾಡಿಯೇ ಮಾಡುತ್ತಾರೆ. ವಿಘ್ನ ನಿವಾರಕನನ್ನು ಪೂಜಿಸಿದರೆ ಎಲ್ಲಾ ಕಾರ್ಯಗಳು ನಿರ್ವಿಘ್ನವಾಗಿ ನಡೆಯುತ್ತದೆ ಎಂಬ ಅಚಲ ನಂಬಿಕೆ ಭಕ್ತರದ್ದು.
ಗಣೇಶ ಚತುರ್ಥಿಯಂದು ಗಣಪನ ಮೂರ್ತಿಯನ್ನು ಪ್ರತಿಷ್ಠಾಪಿಸಿ, ಪೂಜೆಯನ್ನು ಮಾಡಿ, ಗಣಪನಿಗೆ ಇಷ್ಟವಾದ ಮೋದಕಗಳನ್ನು ನೈವೇದ್ಯ ವಾಗಿ ಇಟ್ಟು ನಂತರ ಮೂರು ದಿನಕ್ಕೆ ಅಥವಾ ಏಳು ದಿನಕ್ಕೆ ಹೀಗೆ ತಮ್ಮ ಅನುಕೂಲಕ್ಕೆ ತಕ್ಕಂತೆ ವಿಸರ್ಜನೆ ಮಾಡಲಾಗುವುದು.
ಇಲ್ಲಿ ನಾವು ಗಣೇಶ ಚತುರ್ಥಿಗೆ ನಿಮ್ಮ ಪ್ರೀತಿ ಪಾತ್ರರಿಗೆ ವಿಶ್ ಮಾಡಲು ಶುಭಾಶಯಗಳನ್ನು ನೀಡಿದ್ದೇವೆ ನೋಡಿ:
ಜೀವನದಲ್ಲಿ ಎದುರಾಗಲು ಸಂಕಷ್ಟಗಳನ್ನು ದೂರ ಮಾಡುವ, ಸಿದ್ಧಿ-ಬುದ್ಧಿ ಎಂದರೆ ಜ್ಞಾನದಿಂದ ಆಶೀರ್ವದಿಸಲ್ಪಟ್ಟ ಮತ್ತು ಜ್ಞಾನವನ್ನು ವಿಶ್ಲೇಷಿಸುವ ವಿನಾಯಕ ಚತುರ್ಥಿಗೆ ಇನ್ನೇನು ದಿನಗಣನೆ ಆರಂಭವಾಗಿದೆ. 2021ನೇ ಸಾಲಿನಲ್ಲಿ ಸೆಪ್ಟೆಂಬರ್ 10ರಂದು ಗಣೇಶ ಚತುರ್ಥಿ ಆಚರಿಸಲಾಗುತ್ತಿದೆ.
ಭಾದ್ರಪದ ಮಾಸ, ಶುಕ್ಲ ಪಕ್ಷ, ಚತುರ್ಥಿಯಂದು ಸೆಪ್ಟೆಂಬರ್ 10 ಶುಕ್ರವಾರ ವಿನಾಯಕ ಎಲ್ಲರ ಮನೆಗೆ ಬರಲಿದ್ದಾರೆ. ಈ ದಿನ ನಿಮ್ಮ ಬಂಧು ಬಾಂಧವರಿಗೆ, ಸ್ನೇಹಿತರಿಗೆ ಶುಭ ಕೋರಲು ಆಕರ್ಷಕ ಸಂದೇಶಗಳನ್ನು ನಾವಿಲ್ಲಿ ನೀಡಲಿದ್ದೇವೆ. ಫೇಸ್ಬುಕ್.
ಕೃಷ್ಣ ಜನ್ಮಾಷ್ಟಮಿಯನ್ನು ಭಾರತದಲ್ಲಿ ಆಗಸ್ಟ್ 11 ಹಾಗೂ 12ರಂದು ಆಚರಿಸಲಾಗುವುದು. ಜನ್ಮಾಷ್ಟಮಿ ಅಥವಾ ಗೋಕುಲಾಷ್ಟಮಿ ಎಂದರೆ ಸಂಭ್ರಮದ ಹಬ್ಬ. ಬಾಧ್ರಪದ ಮಾಸದ ಕೃಷ್ಣ ಪಕ್ಷದ ಅಷ್ಟಮಿಯೆಂದು ಜನ್ಮಾಷ್ಟಮಿ ಆಚರಣೆ ಮಾಡಲಾಗುವುದು. ಈ ದಿನ ಕೃಷ್ಣನಿಗೆ ಅಲಂಕಾರ ಮಾಡಿ, ಪೂಜೆ ಸಲ್ಲಿಸಿ, ಅವನಿಗೆ ಇಷ್ಟವಾದ ತಿಂಡಿಗಳನ್ನು ನೈವೇದ್ಯವಾಗಿ ಇಡಲಾಗುವುದು.
ಶ್ರೀ ವಿಷ್ಣು ಧರ್ಮವನ್ನು ರಕ್ಷಿಸಲು ಶ್ರೀಕೃಷ್ಣ ಜನ್ಮ ತಾಳಿ ಬಂದ ಎಂದು ಹೇಳಲಾಗುತ್ತದೆ. ಕೃಷ್ಣನ ಅವತಾರವನ್ನು ಶ್ರೀವಿಷ್ಣುವಿನ ಎಂಟನೇ ಅವತಾರ ಎಂದು ಹೇಳಲಾಗುವುದು.
ಆಗಸ್ಟ್ 3ಕ್ಕೆ ಅಣ್ಣ-ತಂಗಿಯ ಮಧುರ ಬಾಂಧವ್ಯ ಮತ್ತಷ್ಟು ಗಟ್ಟಿಯಾಗಿಸುವ ರಕ್ಷಾ ಬಂಧನ ಹಬ್ಬ. ಈ ಹಬ್ಬದಂದು ಸಹೋದರಿ ತನ್ನ ಸಹೋದರ ಕೈಗೆ ರಾಖಿ ಕಟ್ಟುವ ಸಂಭ್ರಮದಲ್ಲಿದ್ದರೆ, ಅಣ್ಣ ಮುದ್ದಿನ ಸಹೋದರಿಗೆ ಆಕರ್ಷಕ ಗಿಫ್ಟ್ ನೀಡಿ ನಿನ್ನ ಸದಾ ರಕ್ಷಣೆ ಮಾಡುವೆ ಎಂದು ಅಭಯ ನೀಡುವ ದಿನ.
ಪುರಾಣಗಳಲ್ಲಿ ದ್ರೌಪದಿಯು ಶ್ರೀ ಕೃಷ್ಣನಿಗೆ ರಕ್ಷಾಬಂಧನವನ್ನು ಕಟ್ಟಿದಳಂತೆ. ಇದರ ಜೊತೆಗೆ ಪಾರ್ವತಿಯು ಸಹ ವಿಷ್ಣುವಿಗೆ ರಕ್ಷಾ ಬಂಧನವನ್ನು ಕಟ್ಟಿ ಆತನನ್ನು ತನ್ನ ಅಣ್ಣನಾಗಿ ಸ್ವೀಕರಿಸಿದಳಂತೆ. ಅದಕ್ಕೆ ಪ್ರತಿಯಾಗಿ ವಿಷ್ಣು ಪಾರ್ವತಿ ದೇವಿಗೆ ಅಪಾಯವೊದಗಿದಾಗ ಆಕೆಯನ್ನು ತಾನು ಕಾಪಾಡುವುದಾಗಿ ಅಭಯವನ್ನಿತ್ತನಂತೆ.
ಗೆಳೆತನ ಎನ್ನುವುದು ಪದಗಳಿಗೆ ಅಥವಾ ಯಾವುದೇ ಕಟ್ಟುಪಾಡುಗಳಿಗೆ ನುಲುಕುವ ಬಂಧವಲ್ಲ. ಎಲ್ಲಾ ರಕ್ತ ಸಂಬಂಧಗಳನ್ನು ಮೀರಿದ ಸುಂದರ ಬಂದವೇ ಗೆಳೆತನ. ಪ್ರಾಣ ಸ್ನೇಹಿತರು ಯಾವತ್ತಿದ್ದರೂ ಸ್ನೇಹಿತರೇ, ಅವರಿಗೆ ಯಾವುದೇ ಒಂದು ದಿನದ ಆಚರಣೆ ಎನ್ನುವುದು ಬೇಕಾಗಿಲ್ಲ.
ಆದರೂ ಪಾಶ್ಚಾತ್ಯ ದೇಶಗಳಲ್ಲಿ ಸ್ನೇಹಿತರಿಗಾಗಿಯೇ ಒಂದು ದಿನವನ್ನು ಮೀಸಲಿಡಲಾಗಿದೆ. ಇದನ್ನು ಅಂತಾರಾಷ್ಟ್ರೀಯ ಸ್ನೇಹಿತರ ದಿನವನ್ನಾಗಿ ಆಚರಿಸಲಾಗುತ್ತದೆ. ವಿಶ್ವಸಂಸ್ಥೆಯು 2011ರ ಎಪ್ರಿಲ್ 27ರಂದು ತನ್ನ ಅಧಿವೇಶನದಲ್ಲಿ ಜುಲೈ 30ನ್ನು ವಿಶ್ವ ಸ್ನೇಹಿತರ ದಿನವನ್ನಾಗಿ ಘೋಷಣೆ ಮಾಡಿತು. ಆದರೆ ಭಾರತದಲ್ಲಿ.
'ಗುರುವಿನ ಗುಲಾಮನಾಗುವ ತನಕ ದೊರೆಯದ್ದಣ್ಣ ಮುಕುತಿ' ಎಂಬ ನಾಣ್ಣುಡಿಯನ್ನು ಕೇಳಿರ್ತಿರಾ. ಜೀವನದಲ್ಲಿ ಪೋಷಕರ ಪಾತ್ರ ಎಷ್ಟಿದೆಯೋ, ಅಷ್ಟೇ ಗುರುಗಳ ಪಾತ್ರವೂ ಇದೆ. ನಮ್ಮಲ್ಲಿರುವ ಅಂಧಕಾರವನ್ನು ದೂರಮಾಡಿ, ಜ್ಞಾನವೆಂಬ ಬೆಳಕನ್ನು ನೀಡುವ ಮಹಾನ್ ಶಕ್ತಿಯೇ ಗುರು. ಬದುಕಲ್ಲಿ ಏನಾದರೂ ಸಾಧಿಸಬೇಕೆಂದರೆ ಗುರುವಿನ ಮಾರ್ಗದರ್ಶನ ಬೇಕೇ ಬೇಕು. ಇಂತಹ ಗುರುವಿಗೆ ನಮನ ಸಲ್ಲಿಸುವ ದಿನವೇ ಗುರುಪೂರ್ಣಿಮ.
ಮನಸ್ಸು ಮತ್ತು ದೇಹವನ್ನು ಒಂದು ಮಾಡುವ ಸಾಧನ ಯೋಗ. ನಮ್ಮ ಭೂಮಿ ಭಾರತದಲ್ಲಿ ಜನ್ಮತಳೆದ ಯೋಗ ಇಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿಖ್ಯಾತಿ ಪಡೆದು ಭಾರತಕ್ಕೆ ಕಿರೀಟದಂತಿದೆ. ಯೋಗದ ಪ್ರಭಾವ, ಅದು ಆರೋಗ್ಯದ ಮೇಲೆ ಬೀರುವ ಆಗಾಧ ಪರಿಣಾಮ ಮತ್ತು ಅದರ ಶಕ್ತಿ ಅರಿತ ವಿದೇಶಗರು ಭಾರತಕ್ಕೆ ಬಂದು ಯೋಗ ಅಭ್ಯಾಸ ಮಾಡುತ್ತಿದ್ದಾರೆ. 2021 ಅಂತಾರಾಷ್ಟ್ರೀಯ ಯೋಗ ದಿನದ ವಿಶೇಷ ಯೋಗ ಕುರಿತು ಮಹತ್ವ ಸಾರುವ ಶುಭಾಶಯಗಳು ಮತ್ತು ಫೇಸ್ಬುಕ್, ವಾಟ್ಸಾಪ್ ಸಂದೇಶಗಳನ್ನು ನಾವಿಲ್ಲಿ ನೀಡಿದ್ದೇವೆ.2021 ಅಂತಾರಾಷ್ಟ್ರೀಯ ಯೋಗ ದಿನದ ವಿಶೇಷ ಯೋಗ ಕುರಿತು ಮಹತ್ವ.