ಹೆಚ್ಚಿನ ಓದಿಗೆ
: Boldsky Kannada
ಜೀವನ ಅನ್ನೋದು ಸುಖ ದುಃಖಗಳ, ಏರುಪೇರುಗಳ ಸಮಪಾಕ ಅನ್ನೋ ಸಂಗತೀನಾ ನಾವೆಲ್ಲರೂ ಅನುಭವಿಸಿ ಬಲ್ಲೆವು. ಯುಗಾದಿ ಹಬ್ಬದಲ್ಲಿ ಹಂಚೋ ಬೇವು-ಬೆಲ್ಲ ಸಾರುವುದೂ ಇದೇ ಸಂದೇಶವನ್ನೇ. ಜೀವನವೆಂದರೆ ಬರೀ ಕಷ್ಟಗಳ ಸರಮಾಲೆ ಅಂತೇನೂ ನಿಟ್ಟುಸಿರು ಬಿಡಬೇಕಾದ್ದಿಲ್ಲ. ಮಾನವ ಜೀವವೊಂದು ಜನಿಸಿದ ಕ್ಷಣದಿಂದ ಹಿಡಿದು, ಸಾಯುವ ಕ್ಷಣದವರೆಗೂ ಆತನ ಜೀವನದಲ್ಲಿ ಹಾಸುಹೊಕ್ಕಾಗಿ ಬರುವ ಸಂತಸದ ಕ್ಷಣಗಳಿಗೇನೂ ಕೊರತೆಯಿಲ್ಲ.
ಜನ್ಮದಿನದ ಸಂಭ್ರಮ, ವಿದ್ಯಾಭ್ಯಾಸದ ಆರಂಭ, ಪದವಿ ಪಡೆದ ಸಂತಸದ ಕ್ಷಣಗಳು, ಉದ್ಯೋಗ ಗಿಟ್ಟಿಸಿಕೊಂಡ ಅಥವಾ ವಿನೂತನ ವ್ಯವಹಾರವನ್ನು ಆರಂಭಿಸಿದ ಕ್ಷಣ,
ತಾಯಂದಿರ ದಿನ ವರ್ಷದ ವಿಶೇಷ ದಿನ. ನಿಮ್ಮ ಮೊದಲ ಗೆಳತಿ,ನಿಮ್ಮ ಮೊದಲ ಸ್ನೇಹಿತೆಗೆ ವಿಶೇಷ ಗೌರವ ಸಲ್ಲಿಸುವ ದಿನ. ನಿಮಗೆ ಯಾವುದೋ ವಿಚಾರಕ್ಕೆ ಸಲಹೆ ಬೇಕಿದ್ದರೆ ಮೊದಲು ಮುಖ ಮಾಡುವುದೇ ತಾಯಿಯ ಎಡೆಗೆ.
ತಾಯಿಯೇ ಭೂಮಿಯಲ್ಲಿ ಕಾಣುವ ಮೊದಲ ದೇವರು. ನಿಮಗೆ ತಿಳಿದಿರುವ ತಾಯಂದಿರನ್ನು ನೀವು ಗೌರವಿಸುವ ಈ ಸುದಿನದಂದು ನಾವಿಲ್ಲಿ ತಾಯಂದಿರ ಬಗೆಗೆ ಹಿರಿಯ ಜೀವಗಳು ಹೇಳಿರುವ ಕೆಲವು ಅಧ್ಬುತ ಮಾತುಗಳನ್ನು ನಿಮಗಾಗಿ ತಿಳಿಸುತ್ತಿದ್ದೇವೆ.
"ತಾಯಿಯೇ ನಿಮ್ಮ ಮೊದಲ ಸ್ನೇಹಿತೆ, ಉತ್ತಮ ಸ್ನೇಹಿತೆ, ನಿಮ್ಮ ಶಾಶ್ವತ ಸ್ನೇಹಿತೆ."
ವಾಯು ಪುತ್ರ, ರಾಮನ ಭಕ್ತ ಹನುಮಂತನ ಪೂಜಿಸಿದರೆ, ಹನುಮಾನ್ ಮಂತ್ರಗಳನ್ನು ಹೇಳಿದರೆ ಜೀವನದಲ್ಲಿ ಕಷ್ಟಗಳೆಲ್ಲಾ ದೂರವಾಗುವುದು.
ಹನುಮಂತನ ಮಂತ್ರ ಪಠಿಸಿದರೆ ಆತ ಧೈರ್ಯ, ಆರೋಗ್ಯ, ಸಂಪತ್ತು ಎಲ್ಲಾ ಕರುಣಿಸುತ್ತಾನೆ, ವಿಘ್ನ ನಿವಾರಕನಂತೆಯೇ ಹನುಮಂತ ಕೂಡ ನಮ್ಮ ಬದುಕಿನಲ್ಲಿರುವ ಎಲ್ಲಾ ಕಷ್ಟಗಳನ್ನು ನಿವಾರಿಸುತ್ತಾನೆ. ಈ ವರ್ಷ ಹನುಮಾನ್ ಜಯಂತಿಯನ್ನು ಏಪ್ರಿಲ್ 27ಕ್ಕೆ ಆಚರಿಸಲಾಗುವುದು.
ಹನುಮಾನ್ ಜಯಂತಿಗೆ ನಿಮ್ಮ ಪ್ರೀತಿ ಪಾತ್ರರರಿಗೆ ಶುಭ ಕೋರಲು ಇಲ್ಲಿದೆ ಅದ್ಭುತ ಸಾಲುಗಳ ಸಂದೇಶ: ಆ ಭಗವಂತ ನಿಮಗೆ, ನಿಮ್ಮ ಕುಟುಂಬಕ್ಕೆ ಆರೋಗ್ಯ, ಐಶ್ವರ್ಯ ನೀಡಿ ಸಂರಕ್ಷಿಸಲಿ.
ಏಪ್ರಿಲ್ 21ರಂದು ರಾಮ ನವಮಿ ಆಚರಿಸಲಾಗುವುದು. ಭಾರತದಲ್ಲಿ ಶ್ರೀರಾಮನನ್ನು ಕೋಟ್ಯಾಂತರ ಮಂದಿ ಪೂಜಿಸುತ್ತಾರೆ. ಶ್ರೀ ರಾಮ ಆದರ್ಶ ಪುರುಷ, ಶ್ರೀರಾಮ ಜನಿಸಿದ ದಿನವನ್ನು ನಾವೆಲ್ಲರೂ ಶ್ರೀರಾಮ ನವಮಿ ಎಂದು ಆಚರಿಸುತ್ತೇವೆ.
ರಾಮನ ಭಕ್ತರು ಚೈತ್ರ ಮಾಸದ ಶುಕ್ಲ ಪಕ್ಷದ ಪಾಡ್ಯದಿಂದ ನವಮಿವರೆಗೆ ರಾಮಾಯಣ ಪಾರಾಯಣ ಮಾಡಿ , ನವಮಿ ದಿನ ರಾಮ ಪಟ್ಟಾಭಿಷೇಕ ಪಾರಾಯಣ ಮಾಡಿ ಹಬ್ಬವನ್ನು ಮುಗಿಸುತ್ತಾರೆ. ಹೀಗೆ 9 ದಿನದ ರಾಮೋತ್ಸವ ಮಾಡುತ್ತಾರೆ .
ರಾಮ ನಾಮ ಜಪ ಮಾಡಿದರೆ ಸಾಕು ರಾಮ ನಮ್ಮನ್ನು ರಕ್ಷಿಸುತ್ತಾನೆ ಎಂಬ ಅಚಲ ನಂಬಿಕೆ ಭಕ್ತರದ್ದು.
ಹಿಂದೂ ಪಂಚಾಗದ ಪ್ರಕಾರ ಏಪ್ರಿಲ್ 13ಕ್ಕೆ ಪ್ಲವ ನಾಮ ಸಂವತ್ಸರ, ಅಂದ್ರೆ ಹೊಸ ವರ್ಷ. ಹೊಸತನ್ನು ಹೊತ್ತು ಯುಗಾದಿ ಬರುತ್ತದೆ. ಎಲ್ಲರಿಗೂ ಹೊಸ ವರ್ಷದ, ಪ್ಲವ ನಾಮ ಸಂವತ್ಸರದ ಶುಭಾಶಯಗಳು...
ಶ್ರೀ ಶಾರ್ವರಿ ಸಂವತ್ಸರ ಸಿಹಿಗಿಂತ ಕಹಿಯೇ ಹೆಚ್ಚಿತ್ತು, ಕೊರೊನಾ ಎಂಬ ಮಹಾಮಾರಿ ನಮ್ಮೆಲ್ಲರ ಬದುಕಿನ ಮೇಲೆ ತುಂಬಾ ಪರಿಣಾಮ ಬೀರಿತ್ತು. ನಾವೀಗ ಪ್ಲವ ನಾಮ ಸಂವತ್ಸರಕ್ಕೆ ಕಾಲಿಡುತ್ತಿದ್ದೇವೆ. ಹೊಸ ವರ್ಷದಲ್ಲಿ ಕಹಿಯೆಲ್ಲಾ ದೂರವಾಗಿ ಸಿಹಿ ಹೆಚ್ಚಲಿ ಎಂಬ ನಿರೀಕ್ಷೆ ನಮ್ಮೆಲ್ಲರದ್ದೂ...
ಈ ಯುಗಾದಿಗೆ ನಿಮ್ಮ ಪ್ರೀತಿ ಪಾತ್ರರರಿಗೆ ಯುಗಾದಿ ಶುಭಾಶಯ ಕೋರಲು ಕನ್ನಡ ಬೋಲ್ಡ್ ಸ್ಕೈ ಶುಭಾಶಯಗಳನ್ನು ನೀಡಿದೆ.
ಬಣ್ಣಗಳ ಓಕುಳಿಯಾಟ ಎಲ್ಲರಲ್ಲೂ ಸಂಭ್ರಮವನ್ನು ಗರಿಗೆದರುವುದು. ಈ ಹಬ್ಬ ಸರ್ವ ಮತಬಾಂಧವರನ್ನು ಒಂದುಗೂಡಿಸುತ್ತದೆ. ಭಾರತದಾದ್ಯಂತ ಹೋಳಿ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಲಾಗುತ್ತದೆ. ಬಣ್ಣಗಳ ಓಕುಳಿಯಾಟ ಸರ್ವ ಮತಬಾಂಧವರನ್ನು ಒಂದುಗೂಡಿಸುತ್ತದೆ. ಜಾತಿ ಮತಗಳ ಭೇದವಿಲ್ಲದೆ ಆಚರಿಸುವ ಬಣ್ಣಗಳ ಹಬ್ಬ ಹೋಳಿ ತನ್ನದೇ ಆಚಾರ ಸಂಪ್ರದಾಯಗಳನ್ನು ಹೊಂದಿದೆ. ಪ್ರತಿಯೊಂದು ಹಬ್ಬಕ್ಕೂ ಆಚಾರ ಸಂಪ್ರದಾಯ ಪ್ರಮುಖವಾಗಿರುತ್ತದೆ ಅದಕ್ಕೆ ಹೋಳಿ ಹಬ್ಬ ಕೂಡ ಹೊರತಲ್ಲ. ಈ ಹಬ್ಬದಂದು ಬಣ್ಣಗಳನ್ನು ಎರಚಾಡುತ್ತಾ ಸಂತೋಷ, ಸಂಭ್ರಮದಿಂದ ಆಚರಿಸಿ ಜೊತೆಗೆ ಈ ಸಂದೇಶಗಳನ್ನು ನಿಮ್ಮ ಪ್ರೀತಿ ಪಾತ್ರರರೊಂದಿಗೆ ಹಂಚಿಕೊಳ್ಳಿ.
ಶಿವರಾತ್ರಿ ಎಂದರೆ ಪವಿತ್ರವಾದ ಕತ್ತಲು. ಭಕ್ತರು ಇಂದು ಪೂರ್ಣ ಮನಸ್ಸಿನಿಂದ ಮತ್ತು ಪ್ರಾಮಾಣಿಕತೆಯಿಂದ ಶಿವನ ನಾಮ, ಜಪಮಂತ್ರಗಳನ್ನು ಸ್ಮರಣೆ ಮಾಡುತ್ತಾ ಶಿವನ ಆಶೀರ್ವಾದಕ್ಕೆ ಪಾತ್ರರಾಗಲು ಬಯಸುತ್ತಾರೆ. ಮಹಾಶಿವರಾತ್ರಿ ಸಮಯದಲ್ಲಿ ಶಿವ ಪಾರ್ವತಿ ಸಮೇತ ಭೂಲೋಕಕ್ಕೆ ಬಂದು ಸಂಚಾರ ಮಾಡಲಿದ್ದು, ಈ ದಿನದಂದು ಯಾರು ನಿಷ್ಕಲ್ಮಷ ಮನಸ್ಸಿನಿಂದ, ಶಿವನಾಮ ಸ್ಮರಣೆ ಮಾಡಿ ಪೂಜಿಸುತ್ತಾರೋ ಅವರ ಪಾಪಗಳು ಪರಿಹಾರವಾಗುತ್ತದೆ ಎಂಬ ನಂಬಿಕೆ ಇದೆ. ನಂಬಿ ಬಂದ ಭಕ್ತರನ್ನು ಎಂದಿಗೂ ನಿರಾಸೆ ಮಾಡದ ದಯಾಮಯಿ ಮಹಾದೇವ ಆರಾಧಕನ ಪವಿತ್ರ ದಿನದಂದು ದೈವೀಕ ಸಂದೇಶ ಸಾರುವ ಅತ್ಯುತ್ತಮ ಶುಭಾಶಯಗಳು ಇಲ್ಲಿವೆ ನೋಡಿ.
ಆಹಾ... ಪ್ರೇಮಿಗಳ ದಿನ ಬಂದೇ ಬಿಡ್ತು. ಫೆ. 14 ಈ ದಿನಕ್ಕಾಗಿ ಎಷ್ಟೋ ಪ್ರೇಮ ಪಕ್ಷಿಗಳು ಕಾಯ್ತಾ ಇರ್ತವೆ. ಈ ದಿನ ನಮ್ಮ ದಿನ, ನಮ್ಮ ಪ್ರೇಮಿಯ ಮುಂದೆ ಮನಸ್ಸು ತೆರೆದಿಡುವ ದಿನ, ಆಕೆ/ಆತನನ್ನು ನಾನೆಷ್ಟು ಪ್ರೀತಿಸುತ್ತಿದ್ದೇನೆ ಎಂದು ಪ್ರೇಮ ನಿವೇದನೆ ಮಾಡುವ ದಿನ. ಕೆಲವರು ಎಷ್ಟೋ ಸಮಯದಿಂದ ಹೇಳದೆ ಮನಸ್ಸಿನಲ್ಲಿಯೇ ಹುದುಗಿಟ್ಟ ಪ್ರೇಮವನ್ನು ವ್ಯಕ್ತಪಡಿಸಿದರೆ, ಈಗಾಗಲೇ ಪ್ರೀತಿಯಲ್ಲಿ ಇರುವವರು ತನ್ನ ಪ್ರೇಮಿಗಾಗಿ ವಿಶೇಷ ಉಡುಗೊರೆ ನೀಡಿ ಸಂಭ್ರಮಿಸುವ ದಿನ.
ಪ್ರೇಮಿಗಳ ದಿನ ಎಂದ ತಕ್ಷಣ ಅದು ಕೇವಲ ಯೌವನದ ಪ್ರೇಮಕ್ಕೆ ಸೀಮಿತವಾಗುವುದಿಲ್ಲ. ಮದುವೆಯಾಗಿ ಹಣ್ಣು.
ಇದು ಸೂರ್ಯನು ತನ್ನ ಪಥ ಬದಲಿಸುವ ಈ ಸಮಯ. ರೈತರ ಮನೆಮನೆಯಲ್ಲೂ ಉತ್ಸಾಹ, ಸಂಭ್ರಮ ಮನೆ ಮಾಡುವ ಹಬ್ಬ ಸಂಕ್ರಾಂತಿ. ರೈತರು ಬೆಳೆಯ ಪೈರು ತೆಗೆಯುವ ಸಂದರ್ಭದಲ್ಲಿ ಆಚರಿಸಲಾಗುವ ಸಂಕ್ರಾಂತಿ ಹಬ್ಬ ಸಮೃದ್ಧಿಯ ಸಂಕೇತ. ಮಾಗಿಯ ಚಳಿ ಮಾಯವಾಗಿ ಸೂರ್ಯನ ರಶ್ಮಿ ಭೂಮಿಗೆ ಚುಂಬಿಸುವ ವೇಳೆ ಸಂಕ್ರಾಂತಿ ಹಬ್ಬವನ್ನು ಆಚರಿಸಲಾಗುತ್ತದೆ.
ಕರ್ನಾಟಕ, ಆಂಧ್ರಪ್ರದೇಶ ಹಾಗೂ ತಮಿಳುನಾಡಿನಲ್ಲಿ ಈ ಹಬ್ಬವನ್ನು ಸಡಗರ ಸಂಭ್ರಮದಿಂದ ಕುಟುಂಬ ಸದಸ್ಯರೆಲ್ಲಾ ಒಂದಾಗಿ ಆಚರಿಸುವುದು ವಾಡಿಕೆ. ಈ ಹಬ್ಬದಂದು ಬಂಧು-ಬಾಂಧವರಿಗೆ, ಸ್ನೇಹಿತರು, ಆಪ್ತರಿಗೆ ಶುಭಾಶಯ ಕೋರಲು ಇಲ್ಲಿದೆ ಕೆಲವು ಸಂದೇಶಗಳು.