ಗೌರಿ-ಗಣೇಶ ಹಬ್ಬ 2025: ಶುಭಕೋರಲು ಇಲ್ಲಿದೆ ಭಕ್ತಿಪೂರ್ವಕ ಸಂದೇಶಗಳು

ಜೀವನದಲ್ಲಿ ಎದುರಾಗಲು ಸಂಕಷ್ಟಗಳನ್ನು ದೂರ ಮಾಡುವ, ಸಿದ್ಧಿ-ಬುದ್ಧಿ ಎಂದರೆ ಜ್ಞಾನದಿಂದ ಆಶೀರ್ವದಿಸಲ್ಪಟ್ಟ ಮತ್ತು ಜ್ಞಾನವನ್ನು ವಿಶ್ಲೇಷಿಸುವ ವಿನಾಯಕ ಚತುರ್ಥಿಗೆ ಇನ್ನೇನು ದಿನಗಣನೆ ಆರಂಭವಾಗಿದೆ. 2021ನೇ ಸಾಲಿನಲ್ಲಿ ಸೆಪ್ಟೆಂಬರ್‌ 10ರಂದು ಗಣೇಶ ಚತುರ್ಥಿ ಆಚರಿಸಲಾಗುತ್ತಿದೆ.


ಭಾದ್ರಪದ ಮಾಸ, ಶುಕ್ಲ ಪಕ್ಷ, ಚತುರ್ಥಿಯಂದು ಸೆಪ್ಟೆಂಬರ್‌ 10 ಶುಕ್ರವಾರ ವಿನಾಯಕ ಎಲ್ಲರ ಮನೆಗೆ ಬರಲಿದ್ದಾರೆ. ಈ ದಿನ ನಿಮ್ಮ ಬಂಧು ಬಾಂಧವರಿಗೆ, ಸ್ನೇಹಿತರಿಗೆ ಶುಭ ಕೋರಲು ಆಕರ್ಷಕ ಸಂದೇಶಗಳನ್ನು ನಾವಿಲ್ಲಿ ನೀಡಲಿದ್ದೇವೆ. ಫೇಸ್‌ಬುಕ್‌.

ಹಸು vs ಎಮ್ಮೆ ಹಾಲು: ಯಾವುದು ಆರೋಗ್ಯಕ್ಕೆ ಉತ್ತಮ? ತಜ್ಞರು ಏನಂದ್ರು


ಜನ್ಮಾಷ್ಟಮಿಗೆ ಶುಭ ಕೋರಲು ಶುಭಾಶಯ ಹಾಗೂ ಭಗವದ್ಗೀತೆ ಸಾರ

ಕೃಷ್ಣ ಜನ್ಮಾಷ್ಟಮಿಯನ್ನು ಭಾರತದಲ್ಲಿ ಆಗಸ್ಟ್‌ 11 ಹಾಗೂ 12ರಂದು ಆಚರಿಸಲಾಗುವುದು. ಜನ್ಮಾಷ್ಟಮಿ ಅಥವಾ ಗೋಕುಲಾಷ್ಟಮಿ ಎಂದರೆ ಸಂಭ್ರಮದ ಹಬ್ಬ. ಬಾಧ್ರಪದ ಮಾಸದ ಕೃಷ್ಣ ಪಕ್ಷದ ಅಷ್ಟಮಿಯೆಂದು ಜನ್ಮಾಷ್ಟಮಿ ಆಚರಣೆ ಮಾಡಲಾಗುವುದು. ಈ ದಿನ ಕೃಷ್ಣನಿಗೆ ಅಲಂಕಾರ ಮಾಡಿ, ಪೂಜೆ ಸಲ್ಲಿಸಿ, ಅವನಿಗೆ ಇಷ್ಟವಾದ ತಿಂಡಿಗಳನ್ನು ನೈವೇದ್ಯವಾಗಿ ಇಡಲಾಗುವುದು.

ಶ್ರೀ ವಿಷ್ಣು ಧರ್ಮವನ್ನು ರಕ್ಷಿಸಲು ಶ್ರೀಕೃಷ್ಣ ಜನ್ಮ ತಾಳಿ ಬಂದ ಎಂದು ಹೇಳಲಾಗುತ್ತದೆ. ಕೃಷ್ಣನ ಅವತಾರವನ್ನು ಶ್ರೀವಿಷ್ಣುವಿನ ಎಂಟನೇ ಅವತಾರ ಎಂದು ಹೇಳಲಾಗುವುದು.

ರಕ್ಷಾ ಬಂಧನಕ್ಕೆ ಕಳುಹಿಸಲು ಹೃದಯಸ್ಪರ್ಶಿ ಕೋಟ್‌ಗಳು ಇಲ್ಲಿವೆ

ಆಗಸ್ಟ್ 3ಕ್ಕೆ ಅಣ್ಣ-ತಂಗಿಯ ಮಧುರ ಬಾಂಧವ್ಯ ಮತ್ತಷ್ಟು ಗಟ್ಟಿಯಾಗಿಸುವ ರಕ್ಷಾ ಬಂಧನ ಹಬ್ಬ. ಈ ಹಬ್ಬದಂದು ಸಹೋದರಿ ತನ್ನ ಸಹೋದರ ಕೈಗೆ ರಾಖಿ ಕಟ್ಟುವ ಸಂಭ್ರಮದಲ್ಲಿದ್ದರೆ, ಅಣ್ಣ ಮುದ್ದಿನ ಸಹೋದರಿಗೆ ಆಕರ್ಷಕ ಗಿಫ್ಟ್ ನೀಡಿ ನಿನ್ನ ಸದಾ ರಕ್ಷಣೆ ಮಾಡುವೆ ಎಂದು ಅಭಯ ನೀಡುವ ದಿನ.

ಪುರಾಣಗಳಲ್ಲಿ ದ್ರೌಪದಿಯು ಶ್ರೀ ಕೃಷ್ಣನಿಗೆ ರಕ್ಷಾಬಂಧನವನ್ನು ಕಟ್ಟಿದಳಂತೆ. ಇದರ ಜೊತೆಗೆ ಪಾರ್ವತಿಯು ಸಹ ವಿಷ್ಣುವಿಗೆ ರಕ್ಷಾ ಬಂಧನವನ್ನು ಕಟ್ಟಿ ಆತನನ್ನು ತನ್ನ ಅಣ್ಣನಾಗಿ ಸ್ವೀಕರಿಸಿದಳಂತೆ. ಅದಕ್ಕೆ ಪ್ರತಿಯಾಗಿ ವಿಷ್ಣು ಪಾರ್ವತಿ ದೇವಿಗೆ ಅಪಾಯವೊದಗಿದಾಗ ಆಕೆಯನ್ನು ತಾನು ಕಾಪಾಡುವುದಾಗಿ ಅಭಯವನ್ನಿತ್ತನಂತೆ.

Advertisement

ಹಾಟ್ & ಸ್ಪೈಸಿ.. ಮಳೆಗಾಲಕ್ಕೆ ಚಿಲ್ಲಿ ಇಡ್ಲಿ ಮಾಡಿ ನೋಡಿ


ಸ್ನೇಹಿತರ ದಿನ 2025: ಶುಭಾಶಯ ಕೋರಲು ಇಲ್ಲಿವೆ ಸುಂದರ ಸಂದೇಶಗಳು

ಗೆಳೆತನ ಎನ್ನುವುದು ಪದಗಳಿಗೆ ಅಥವಾ ಯಾವುದೇ ಕಟ್ಟುಪಾಡುಗಳಿಗೆ ನುಲುಕುವ ಬಂಧವಲ್ಲ. ಎಲ್ಲಾ ರಕ್ತ ಸಂಬಂಧಗಳನ್ನು ಮೀರಿದ ಸುಂದರ ಬಂದವೇ ಗೆಳೆತನ. ಪ್ರಾಣ ಸ್ನೇಹಿತರು ಯಾವತ್ತಿದ್ದರೂ ಸ್ನೇಹಿತರೇ, ಅವರಿಗೆ ಯಾವುದೇ ಒಂದು ದಿನದ ಆಚರಣೆ ಎನ್ನುವುದು ಬೇಕಾಗಿಲ್ಲ.

ಆದರೂ ಪಾಶ್ಚಾತ್ಯ ದೇಶಗಳಲ್ಲಿ ಸ್ನೇಹಿತರಿಗಾಗಿಯೇ ಒಂದು ದಿನವನ್ನು ಮೀಸಲಿಡಲಾಗಿದೆ. ಇದನ್ನು ಅಂತಾರಾಷ್ಟ್ರೀಯ ಸ್ನೇಹಿತರ ದಿನವನ್ನಾಗಿ ಆಚರಿಸಲಾಗುತ್ತದೆ. ವಿಶ್ವಸಂಸ್ಥೆಯು 2011ರ ಎಪ್ರಿಲ್ 27ರಂದು ತನ್ನ ಅಧಿವೇಶನದಲ್ಲಿ ಜುಲೈ 30ನ್ನು ವಿಶ್ವ ಸ್ನೇಹಿತರ ದಿನವನ್ನಾಗಿ ಘೋಷಣೆ ಮಾಡಿತು. ಆದರೆ ಭಾರತದಲ್ಲಿ.

ಗುರುಪೂರ್ಣಿಮಾ 2025: ನೆಚ್ಚಿನ ಗುರುವಿಗೆ ಶುಭಾಶಯ ಕೋರಲು ಸಂದೇಶ

'ಗುರುವಿನ ಗುಲಾಮನಾಗುವ ತನಕ ದೊರೆಯದ್ದಣ್ಣ ಮುಕುತಿ' ಎಂಬ ನಾಣ್ಣುಡಿಯನ್ನು ಕೇಳಿರ್ತಿರಾ. ಜೀವನದಲ್ಲಿ ಪೋಷಕರ ಪಾತ್ರ ಎಷ್ಟಿದೆಯೋ, ಅಷ್ಟೇ ಗುರುಗಳ ಪಾತ್ರವೂ ಇದೆ. ನಮ್ಮಲ್ಲಿರುವ ಅಂಧಕಾರವನ್ನು ದೂರಮಾಡಿ, ಜ್ಞಾನವೆಂಬ ಬೆಳಕನ್ನು ನೀಡುವ ಮಹಾನ್ ಶಕ್ತಿಯೇ ಗುರು. ಬದುಕಲ್ಲಿ ಏನಾದರೂ ಸಾಧಿಸಬೇಕೆಂದರೆ ಗುರುವಿನ ಮಾರ್ಗದರ್ಶನ ಬೇಕೇ ಬೇಕು. ಇಂತಹ ಗುರುವಿಗೆ ನಮನ ಸಲ್ಲಿಸುವ ದಿನವೇ ಗುರುಪೂರ್ಣಿಮ.

Advertisement

ಯೋಗ ಮಹತ್ವ ಸಾರುವ ಶುಭಾಶಯಗಳು, ವಾಟ್ಸಾಪ್‌ ಸಂದೇಶಗಳು

ಮನಸ್ಸು ಮತ್ತು ದೇಹವನ್ನು ಒಂದು ಮಾಡುವ ಸಾಧನ ಯೋಗ. ನಮ್ಮ ಭೂಮಿ ಭಾರತದಲ್ಲಿ ಜನ್ಮತಳೆದ ಯೋಗ ಇಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿಖ್ಯಾತಿ ಪಡೆದು ಭಾರತಕ್ಕೆ ಕಿರೀಟದಂತಿದೆ. ಯೋಗದ ಪ್ರಭಾವ, ಅದು ಆರೋಗ್ಯದ ಮೇಲೆ ಬೀರುವ ಆಗಾಧ ಪರಿಣಾಮ ಮತ್ತು ಅದರ ಶಕ್ತಿ ಅರಿತ ವಿದೇಶಗರು ಭಾರತಕ್ಕೆ ಬಂದು ಯೋಗ ಅಭ್ಯಾಸ ಮಾಡುತ್ತಿದ್ದಾರೆ. 2021 ಅಂತಾರಾಷ್ಟ್ರೀಯ ಯೋಗ ದಿನದ ವಿಶೇಷ ಯೋಗ ಕುರಿತು ಮಹತ್ವ ಸಾರುವ ಶುಭಾಶಯಗಳು ಮತ್ತು ಫೇಸ್‌ಬುಕ್‌, ವಾಟ್ಸಾಪ್‌ ಸಂದೇಶಗಳನ್ನು ನಾವಿಲ್ಲಿ ನೀಡಿದ್ದೇವೆ.2021 ಅಂತಾರಾಷ್ಟ್ರೀಯ ಯೋಗ ದಿನದ ವಿಶೇಷ ಯೋಗ ಕುರಿತು ಮಹತ್ವ.

ಈ ರಾಶಿಯವರಿಗೆ ಪ್ರೀತಿಯಲ್ಲಿ ಯಶಸ್ಸು.. ಇವರ ಮನಸ್ಸು ರೋಮ್ಯಾಂಟಿಕ್!


Curd: ಈ ತರಕಾರಿಗಳೊಂದಿಗೆ ಮೊಸರು ತಿನ್ನಬೇಡಿ.. ಇದು ವಿಷಕ್ಕೆ ಸಮ


70ರಲ್ಲೂ 20ರಂತೆ ಕಾಣಬೇಕೆ? ಈ ಅಭ್ಯಾಸ ನಿಮ್ಮ ಬ್ಯೂಟಿ ಕಾಪಾಡುತ್ತೆ!


Advertisement

ಮದುವೆ ವಾರ್ಷಿಕೋತ್ಸವಕ್ಕೆ ಈ ರೀತಿ ಶುಭ ಕೋರಿದರೆ ಚೆಂದ!

ಜೀವನ ಅನ್ನೋದು ಸುಖ ದುಃಖಗಳ, ಏರುಪೇರುಗಳ ಸಮಪಾಕ ಅನ್ನೋ ಸಂಗತೀನಾ ನಾವೆಲ್ಲರೂ ಅನುಭವಿಸಿ ಬಲ್ಲೆವು. ಯುಗಾದಿ ಹಬ್ಬದಲ್ಲಿ ಹಂಚೋ ಬೇವು-ಬೆಲ್ಲ ಸಾರುವುದೂ ಇದೇ ಸಂದೇಶವನ್ನೇ. ಜೀವನವೆಂದರೆ ಬರೀ ಕಷ್ಟಗಳ ಸರಮಾಲೆ ಅಂತೇನೂ ನಿಟ್ಟುಸಿರು ಬಿಡಬೇಕಾದ್ದಿಲ್ಲ. ಮಾನವ ಜೀವವೊಂದು ಜನಿಸಿದ ಕ್ಷಣದಿಂದ ಹಿಡಿದು, ಸಾಯುವ ಕ್ಷಣದವರೆಗೂ ಆತನ ಜೀವನದಲ್ಲಿ ಹಾಸುಹೊಕ್ಕಾಗಿ ಬರುವ ಸಂತಸದ ಕ್ಷಣಗಳಿಗೇನೂ ಕೊರತೆಯಿಲ್ಲ.

ಜನ್ಮದಿನದ ಸಂಭ್ರಮ, ವಿದ್ಯಾಭ್ಯಾಸದ ಆರಂಭ, ಪದವಿ ಪಡೆದ ಸಂತಸದ ಕ್ಷಣಗಳು, ಉದ್ಯೋಗ ಗಿಟ್ಟಿಸಿಕೊಂಡ ಅಥವಾ ವಿನೂತನ ವ್ಯವಹಾರವನ್ನು ಆರಂಭಿಸಿದ ಕ್ಷಣ, 

ಅಮ್ಮಂದಿರ ದಿನಕ್ಕೆ ಶುಭ ಕೋರಲು ಇಲ್ಲಿದೆ ಶುಭಾಶಯಗಳು ಮತ್ತು ಸಂದೇಶಗಳು

ತಾಯಂದಿರ ದಿನ ವರ್ಷದ ವಿಶೇಷ ದಿನ. ನಿಮ್ಮ ಮೊದಲ ಗೆಳತಿ,ನಿಮ್ಮ ಮೊದಲ ಸ್ನೇಹಿತೆಗೆ ವಿಶೇಷ ಗೌರವ ಸಲ್ಲಿಸುವ ದಿನ. ನಿಮಗೆ ಯಾವುದೋ ವಿಚಾರಕ್ಕೆ ಸಲಹೆ ಬೇಕಿದ್ದರೆ ಮೊದಲು ಮುಖ ಮಾಡುವುದೇ ತಾಯಿಯ ಎಡೆಗೆ.

ತಾಯಿಯೇ ಭೂಮಿಯಲ್ಲಿ ಕಾಣುವ ಮೊದಲ ದೇವರು. ನಿಮಗೆ ತಿಳಿದಿರುವ ತಾಯಂದಿರನ್ನು ನೀವು ಗೌರವಿಸುವ ಈ ಸುದಿನದಂದು ನಾವಿಲ್ಲಿ ತಾಯಂದಿರ ಬಗೆಗೆ ಹಿರಿಯ ಜೀವಗಳು ಹೇಳಿರುವ ಕೆಲವು ಅಧ್ಬುತ ಮಾತುಗಳನ್ನು ನಿಮಗಾಗಿ ತಿಳಿಸುತ್ತಿದ್ದೇವೆ.

"ತಾಯಿಯೇ ನಿಮ್ಮ ಮೊದಲ ಸ್ನೇಹಿತೆ, ಉತ್ತಮ ಸ್ನೇಹಿತೆ, ನಿಮ್ಮ ಶಾಶ್ವತ ಸ್ನೇಹಿತೆ."

ಹನುಮಾನ್‌ ಜಯಂತಿಗೆ ಶುಭ ಕೋರಲು ಇಲ್ಲಿದೆ ನೋಡಿ ಶುಭಾಶಯಗಳು


ವಾಯು ಪುತ್ರ, ರಾಮನ ಭಕ್ತ ಹನುಮಂತನ ಪೂಜಿಸಿದರೆ, ಹನುಮಾನ್‌ ಮಂತ್ರಗಳನ್ನು ಹೇಳಿದರೆ ಜೀವನದಲ್ಲಿ ಕಷ್ಟಗಳೆಲ್ಲಾ ದೂರವಾಗುವುದು.

ಹನುಮಂತನ ಮಂತ್ರ ಪಠಿಸಿದರೆ ಆತ ಧೈರ್ಯ, ಆರೋಗ್ಯ, ಸಂಪತ್ತು ಎಲ್ಲಾ ಕರುಣಿಸುತ್ತಾನೆ, ವಿಘ್ನ ನಿವಾರಕನಂತೆಯೇ ಹನುಮಂತ ಕೂಡ ನಮ್ಮ ಬದುಕಿನಲ್ಲಿರುವ ಎಲ್ಲಾ ಕಷ್ಟಗಳನ್ನು ನಿವಾರಿಸುತ್ತಾನೆ. ಈ ವರ್ಷ ಹನುಮಾನ್ ಜಯಂತಿಯನ್ನು ಏಪ್ರಿಲ್ 27ಕ್ಕೆ ಆಚರಿಸಲಾಗುವುದು.

ಹನುಮಾನ್ ಜಯಂತಿಗೆ ನಿಮ್ಮ ಪ್ರೀತಿ ಪಾತ್ರರರಿಗೆ ಶುಭ ಕೋರಲು ಇಲ್ಲಿದೆ ಅದ್ಭುತ ಸಾಲುಗಳ ಸಂದೇಶ: ಆ ಭಗವಂತ ನಿಮಗೆ, ನಿಮ್ಮ ಕುಟುಂಬಕ್ಕೆ ಆರೋಗ್ಯ, ಐಶ್ವರ್ಯ ನೀಡಿ ಸಂರಕ್ಷಿಸಲಿ.

ಶ್ರೀ ರಾಮ ನವಮಿಗೆ ಶುಭ ಕೋರಲು ಇಲ್ಲಿವೆ ಶುಭಾಶಯಗಳು

ಏಪ್ರಿಲ್ 21ರಂದು ರಾಮ ನವಮಿ ಆಚರಿಸಲಾಗುವುದು. ಭಾರತದಲ್ಲಿ ಶ್ರೀರಾಮನನ್ನು ಕೋಟ್ಯಾಂತರ ಮಂದಿ ಪೂಜಿಸುತ್ತಾರೆ. ಶ್ರೀ ರಾಮ ಆದರ್ಶ ಪುರುಷ, ಶ್ರೀರಾಮ ಜನಿಸಿದ ದಿನವನ್ನು ನಾವೆಲ್ಲರೂ ಶ್ರೀರಾಮ ನವಮಿ ಎಂದು ಆಚರಿಸುತ್ತೇವೆ.

ರಾಮನ ಭಕ್ತರು ಚೈತ್ರ ಮಾಸದ ಶುಕ್ಲ ಪಕ್ಷದ ಪಾಡ್ಯದಿಂದ ನವಮಿವರೆಗೆ ರಾಮಾಯಣ ಪಾರಾಯಣ ಮಾಡಿ , ನವಮಿ ದಿನ ರಾಮ ಪಟ್ಟಾಭಿಷೇಕ ಪಾರಾಯಣ ಮಾಡಿ ಹಬ್ಬವನ್ನು ಮುಗಿಸುತ್ತಾರೆ. ಹೀಗೆ 9 ದಿನದ ರಾಮೋತ್ಸವ ಮಾಡುತ್ತಾರೆ .

ರಾಮ ನಾಮ ಜಪ ಮಾಡಿದರೆ ಸಾಕು ರಾಮ ನಮ್ಮನ್ನು ರಕ್ಷಿಸುತ್ತಾನೆ ಎಂಬ ಅಚಲ ನಂಬಿಕೆ ಭಕ್ತರದ್ದು.

Advertisement

ಯುಗಾದಿ ಶುಭಾಶಯಗಳು: ಕ್ರೋಧಿ ನಾಮ ಸಂವತ್ಸರಕ್ಕೆ ಈ ರೀತಿ ಶುಭ ಕೋರಿ

ಹಿಂದೂ ಪಂಚಾಗದ ಪ್ರಕಾರ ಏಪ್ರಿಲ್ 13ಕ್ಕೆ ಪ್ಲವ ನಾಮ ಸಂವತ್ಸರ, ಅಂದ್ರೆ ಹೊಸ ವರ್ಷ. ಹೊಸತನ್ನು ಹೊತ್ತು ಯುಗಾದಿ ಬರುತ್ತದೆ. ಎಲ್ಲರಿಗೂ ಹೊಸ ವರ್ಷದ, ಪ್ಲವ ನಾಮ ಸಂವತ್ಸರದ ಶುಭಾಶಯಗಳು...

ಶ್ರೀ ಶಾರ್ವರಿ ಸಂವತ್ಸರ ಸಿಹಿಗಿಂತ ಕಹಿಯೇ ಹೆಚ್ಚಿತ್ತು, ಕೊರೊನಾ ಎಂಬ ಮಹಾಮಾರಿ ನಮ್ಮೆಲ್ಲರ ಬದುಕಿನ ಮೇಲೆ ತುಂಬಾ ಪರಿಣಾಮ ಬೀರಿತ್ತು. ನಾವೀಗ ಪ್ಲವ ನಾಮ ಸಂವತ್ಸರಕ್ಕೆ ಕಾಲಿಡುತ್ತಿದ್ದೇವೆ. ಹೊಸ ವರ್ಷದಲ್ಲಿ ಕಹಿಯೆಲ್ಲಾ ದೂರವಾಗಿ ಸಿಹಿ ಹೆಚ್ಚಲಿ ಎಂಬ ನಿರೀಕ್ಷೆ ನಮ್ಮೆಲ್ಲರದ್ದೂ...

ಈ ಯುಗಾದಿಗೆ ನಿಮ್ಮ ಪ್ರೀತಿ ಪಾತ್ರರರಿಗೆ ಯುಗಾದಿ ಶುಭಾಶಯ ಕೋರಲು ಕನ್ನಡ ಬೋಲ್ಡ್ ಸ್ಕೈ ಶುಭಾಶಯಗಳನ್ನು ನೀಡಿದೆ.

ಹೋಳಿ ಹಬ್ಬಕ್ಕೆ ಶುಭ ಕೋರಲು ಸಂದೇಶ ಇಲ್ಲಿವೆ

ಬಣ್ಣಗಳ ಓಕುಳಿಯಾಟ ಎಲ್ಲರಲ್ಲೂ ಸಂಭ್ರಮವನ್ನು ಗರಿಗೆದರುವುದು. ಈ ಹಬ್ಬ ಸರ್ವ ಮತಬಾಂಧವರನ್ನು ಒಂದುಗೂಡಿಸುತ್ತದೆ. ಭಾರತದಾದ್ಯಂತ ಹೋಳಿ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಲಾಗುತ್ತದೆ. ಬಣ್ಣಗಳ ಓಕುಳಿಯಾಟ ಸರ್ವ ಮತಬಾಂಧವರನ್ನು ಒಂದುಗೂಡಿಸುತ್ತದೆ. ಜಾತಿ ಮತಗಳ ಭೇದವಿಲ್ಲದೆ ಆಚರಿಸುವ ಬಣ್ಣಗಳ ಹಬ್ಬ ಹೋಳಿ ತನ್ನದೇ ಆಚಾರ ಸಂಪ್ರದಾಯಗಳನ್ನು ಹೊಂದಿದೆ. ಪ್ರತಿಯೊಂದು ಹಬ್ಬಕ್ಕೂ ಆಚಾರ ಸಂಪ್ರದಾಯ ಪ್ರಮುಖವಾಗಿರುತ್ತದೆ ಅದಕ್ಕೆ ಹೋಳಿ ಹಬ್ಬ ಕೂಡ ಹೊರತಲ್ಲ. ಈ ಹಬ್ಬದಂದು ಬಣ್ಣಗಳನ್ನು ಎರಚಾಡುತ್ತಾ ಸಂತೋಷ, ಸಂಭ್ರಮದಿಂದ ಆಚರಿಸಿ ಜೊತೆಗೆ ಈ ಸಂದೇಶಗಳನ್ನು ನಿಮ್ಮ ಪ್ರೀತಿ ಪಾತ್ರರರೊಂದಿಗೆ ಹಂಚಿಕೊಳ್ಳಿ.

ದೈವೀಕ ಸಂದೇಶ ಸಾರುವ ಶಿವರಾತ್ರಿ ಶುಭಾಶಯಗಳು

ಶಿವರಾತ್ರಿ ಎಂದರೆ ಪವಿತ್ರವಾದ ಕತ್ತಲು. ಭಕ್ತರು ಇಂದು ಪೂರ್ಣ ಮನಸ್ಸಿನಿಂದ ಮತ್ತು ಪ್ರಾಮಾಣಿಕತೆಯಿಂದ ಶಿವನ ನಾಮ, ಜಪಮಂತ್ರಗಳನ್ನು ಸ್ಮರಣೆ ಮಾಡುತ್ತಾ ಶಿವನ ಆಶೀರ್ವಾದಕ್ಕೆ ಪಾತ್ರರಾಗಲು ಬಯಸುತ್ತಾರೆ. ಮಹಾಶಿವರಾತ್ರಿ ಸಮಯದಲ್ಲಿ ಶಿವ ಪಾರ್ವತಿ ಸಮೇತ ಭೂಲೋಕಕ್ಕೆ ಬಂದು ಸಂಚಾರ ಮಾಡಲಿದ್ದು, ಈ ದಿನದಂದು ಯಾರು ನಿಷ್ಕಲ್ಮಷ ಮನಸ್ಸಿನಿಂದ, ಶಿವನಾಮ ಸ್ಮರಣೆ ಮಾಡಿ ಪೂಜಿಸುತ್ತಾರೋ ಅವರ ಪಾಪಗಳು ಪರಿಹಾರವಾಗುತ್ತದೆ ಎಂಬ ನಂಬಿಕೆ ಇದೆ. ನಂಬಿ ಬಂದ ಭಕ್ತರನ್ನು ಎಂದಿಗೂ ನಿರಾಸೆ ಮಾಡದ ದಯಾಮಯಿ ಮಹಾದೇವ ಆರಾಧಕನ ಪವಿತ್ರ ದಿನದಂದು ದೈವೀಕ ಸಂದೇಶ ಸಾರುವ ಅತ್ಯುತ್ತಮ ಶುಭಾಶಯಗಳು ಇಲ್ಲಿವೆ ನೋಡಿ.

Advertisement

Valentine's Day 2025: ಪ್ರೇಮಿಗಳ ದಿನ ಸಂದೇಶಗಳಿವು

ಆಹಾ... ಪ್ರೇಮಿಗಳ ದಿನ ಬಂದೇ ಬಿಡ್ತು. ಫೆ. 14 ಈ ದಿನಕ್ಕಾಗಿ ಎಷ್ಟೋ ಪ್ರೇಮ ಪಕ್ಷಿಗಳು ಕಾಯ್ತಾ ಇರ್ತವೆ. ಈ ದಿನ ನಮ್ಮ ದಿನ, ನಮ್ಮ ಪ್ರೇಮಿಯ ಮುಂದೆ ಮನಸ್ಸು ತೆರೆದಿಡುವ ದಿನ, ಆಕೆ/ಆತನನ್ನು ನಾನೆಷ್ಟು ಪ್ರೀತಿಸುತ್ತಿದ್ದೇನೆ ಎಂದು ಪ್ರೇಮ ನಿವೇದನೆ ಮಾಡುವ ದಿನ. ಕೆಲವರು ಎಷ್ಟೋ ಸಮಯದಿಂದ ಹೇಳದೆ ಮನಸ್ಸಿನಲ್ಲಿಯೇ ಹುದುಗಿಟ್ಟ ಪ್ರೇಮವನ್ನು ವ್ಯಕ್ತಪಡಿಸಿದರೆ, ಈಗಾಗಲೇ ಪ್ರೀತಿಯಲ್ಲಿ ಇರುವವರು ತನ್ನ ಪ್ರೇಮಿಗಾಗಿ ವಿಶೇಷ ಉಡುಗೊರೆ ನೀಡಿ ಸಂಭ್ರಮಿಸುವ ದಿನ.

ಪ್ರೇಮಿಗಳ ದಿನ ಎಂದ ತಕ್ಷಣ ಅದು ಕೇವಲ ಯೌವನದ ಪ್ರೇಮಕ್ಕೆ ಸೀಮಿತವಾಗುವುದಿಲ್ಲ. ಮದುವೆಯಾಗಿ ಹಣ್ಣು.

ಕೇರಳದ ವಿಷ ಕನ್ಯೆಗೆ ಮರಣದಂಡನೆ ವಿಧಿಸಿದ ಕೋರ್ಟ್‌


ಸಂಕ್ರಾಂತಿಗೆ 8 ಅತ್ಯುತ್ತಮ ಶುಭಾಶಯಗಳು ಇಲ್ಲಿವೆ ನೋಡಿ

ಇದು ಸೂರ್ಯನು ತನ್ನ ಪಥ ಬದಲಿಸುವ ಈ ಸಮಯ. ರೈತರ ಮನೆಮನೆಯಲ್ಲೂ ಉತ್ಸಾಹ, ಸಂಭ್ರಮ ಮನೆ ಮಾಡುವ ಹಬ್ಬ ಸಂಕ್ರಾಂತಿ. ರೈತರು ಬೆಳೆಯ ಪೈರು ತೆಗೆಯುವ ಸಂದರ್ಭದಲ್ಲಿ ಆಚರಿಸಲಾಗುವ ಸಂಕ್ರಾಂತಿ ಹಬ್ಬ ಸಮೃದ್ಧಿಯ ಸಂಕೇತ. ಮಾಗಿಯ ಚಳಿ ಮಾಯವಾಗಿ ಸೂರ್ಯನ ರಶ್ಮಿ ಭೂಮಿಗೆ ಚುಂಬಿಸುವ ವೇಳೆ ಸಂಕ್ರಾಂತಿ ಹಬ್ಬವನ್ನು ಆಚರಿಸಲಾಗುತ್ತದೆ.

ಕರ್ನಾಟಕ, ಆಂಧ್ರಪ್ರದೇಶ ಹಾಗೂ ತಮಿಳುನಾಡಿನಲ್ಲಿ ಈ ಹಬ್ಬವನ್ನು ಸಡಗರ ಸಂಭ್ರಮದಿಂದ ಕುಟುಂಬ ಸದಸ್ಯರೆಲ್ಲಾ ಒಂದಾಗಿ ಆಚರಿಸುವುದು ವಾಡಿಕೆ. ಈ ಹಬ್ಬದಂದು ಬಂಧು-ಬಾಂಧವರಿಗೆ, ಸ್ನೇಹಿತರು, ಆಪ್ತರಿಗೆ ಶುಭಾಶಯ ಕೋರಲು ಇಲ್ಲಿದೆ ಕೆಲವು ಸಂದೇಶಗಳು.

ಮಕ್ಕಳಲ್ಲಿ ಬುದ್ಧಿಂತಿಕೆ ಹೆಚ್ಚಿಸಲು ಏನು ಮಾಡಬೇಕು?


Advertisement